ಜಗತ್ತಿನ ಭೂಪಟದಿಂದ ಪಾಕ್​ ಉಡೀಸ್ ಫಿಕ್ಸ್ – ಪಶ್ಚಿಮ ಭಾಗ ಸೇರಿ ಎಲ್ಲಾ ಕಡೆಯಿಂದ ಸೇನೆ ದಿಗ್ಬಂಧನ.. ‘ಪಾಪಿ’ಸ್ತಾನ ಗಢಗಢ!

ನವದೆಹಲಿ : ಪಾಕಿಸ್ತಾನ ಹಾಗೂ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಭಾರತೀಯ ಸೇನೆಯಿಂದ ಬ್ಲೂ ಪ್ರಿಂಟ್ ರೆಡಿ ಆಗಿದ್ದು, ಆಪರೇಷನ್ ‘ಆಕ್ರಮಣ್’ ಹೆಸರಲ್ಲಿ ಶೀಘ್ರವೇ ಕಾರ್ಯಾಚರಣೆ ನಡೆಯಲಿದೆ. ಶತ್ರು ‘ಪಾಪಿ’ಸ್ತಾನವನ್ನು ಜಗತ್ತಿನ ಭೂಪಟದಿಂದಲೇ ಉಡೀಸ್ ಮಾಡೋಕೆ ಸಜ್ಜಾಗಿರುವ ಭಾರತೀಯ ಸೇನಾ ಪಡೆ, ಪಾಕ್ ಆಕ್ರಮಿತ ಎಲ್ಲಾ ಪ್ರದೇಶವನ್ನು ಸಂಪೂರ್ಣವಾಗಿ ಧ್ವಂಸ ಮಾಡಲು ಕಾರ್ಯತಂತ್ರ ರೂಪಿಸಿದೆ.

ಈಗಾಗಲೇ ಪಾಕ್​ ವಿರುದ್ಧ ಪ್ರತೀಕಾರಕ್ಕೆ ಪ್ರಧಾನಿ ಮೋದಿ ಗ್ನೀನ್​ ಸಿಗ್ನಲ್ ಕೊಟ್ಟಿದ್ದಾರೆ. ಮೋದಿ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಭಾರತದ 3 ಸೇನಾಪಡೆಗಳ ಮುಖ್ಯಸ್ಥರ ಜೊತೆ ಪಾಕ್​ ವಿರುದ್ಧದ ಪ್ರತೀಕಾರದ ಕುರಿತು ಚರ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ್ ಮಾರ್ಗ್‌ನ ನಿವಾಸದಲ್ಲಿ ಉನ್ನತ‌ ಮಟ್ಟದ ಸಭೆ ನಡೆದಿದ್ದು, ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್, ವಿದೇಶಾಂಗ ಸಚಿವ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭೂಸೇನೆ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ನೌಕಾ ಸೇನೆ ಮುಖ್ಯಸ್ಥ ದಿನೇಶ್ ಕುಮಾರ್ ತ್ರಿಪಾಠಿ ಮತ್ತು ವಾಯುಸೇನೆ ಮುಖ್ಯಸ್ಥ ಅಮರ್​ ಪ್ರೀತ್​ ಸಿಂಗ್ ಭಾಗಿಯಾಗಿದ್ದರು.

ಸಭೆಯಲ್ಲಿ ಪ್ರಮುಖವಾಗಿ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಯಾವ ರೀತಿ ಕಾರ್ಯಾಚರಣೆ ಮಾಡಬೇಕು ಅನ್ನೋದರ ಬಗ್ಗೆ ಚರ್ಚಿಸಲಾಗಿದೆ. ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಮೂರು ಸೇನೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್ ಸಲಹೆಗಳನ್ನ ನೀಡಿದ್ದಾರೆ. ಕೊನೆಗೆ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಪಾಕ್​ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಮೋದಿ ತಿಳಿಸಿದ್ದಾರೆ. ಆಪರೇಷನ್​ ಆಕ್ರಮಣ್‌ನಲ್ಲಿ ಮೂರು ಸೇನೆಗೆ ಭಾರತ ಸರ್ಕಾರದಿಂದ ಮುಕ್ತ ಅವಕಾಶ ನೀಡಲಾಗಿದೆ. ಸಮಯ, ಸ್ಥಳ.. ನಿಮ್ಮ ವಿವೇಚನೆಗೇ ಬಿಟ್ಟಿದ್ದು. ನೀವೇ ನಿರ್ಧಾರ ಮಾಡಿ ಎಂದು ಸೇನೆಗಳಿಗೆ ಮುಕ್ತ ಸ್ವಾತಂತ್ರ್ಯವನ್ನು ಭಾರತ ಸರ್ಕಾರ ನೀಡಿದೆ. ಅದರಂತೆ ಇಂದೇ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ರಣಾಂಗಣಕ್ಕೆ ಇಳಿಯಲಿದೆ.

ಈಗಾಗಲೇ ಪರಮ ಶತ್ರು ಪಾಕಿಸ್ತಾನದ ಸುತ್ತ ಭಾರತೀಯ ಸೇನೆ ಜಮಾವಣೆಯಾಗಿದೆ. ಅರಬ್ಬಿ ಸಮುದ್ರದ ಪಶ್ಚಿಮ ಭಾಗ, ಉತ್ತರ ಭಾಗದಿಂದ ಅಟ್ಯಾಕ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಪಾಕಿಸ್ತಾನಕ್ಕೆ ಎಲ್ಲಾ ಕಡೆಯಿಂದಲೂ ಇಂಡಿಯಾನ್​ ಆರ್ಮಿ ಸುತ್ತುವರಿದಿದೆ.

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಬೆಂಬಲದ ಮಹಾಪೂರವೇ ಹರಿದುಬಂದಿದ್ದು, ಅಮೆರಿಕಾ, ಇಸ್ರೇಲ್​​, ರಷ್ಯಾ, ಫ್ರಾನ್ಸ್ ಹಾಗೆಯೇ ಯುರೋಪಿಯನ್ ರಾಷ್ಟ್ರಗಳಾದ ಬ್ರಿಟನ್, ಜಪಾನ್​​​ ಸೇರಿ ಹಲವು ದೇಶಗಳಿಂದ ಭಾರತಕ್ಕೆ ಬೆಂಬಲ ದೊರೆತಿದೆ. ಸ್ಯಾಟಲೈಟ್​ ಮೂಲಕ ಭಾರತದ ಮೇಲೆ ರಾಷ್ಟ್ರಗಳು ನಿಗಾ ಇಟ್ಟಿದೆ.

ಇನ್ನು ಇಲ್ಲಿಯವರಿಗೆ 46 ಪಾಕ್​ ಉಗ್ರರ ಪ್ರಮುಖ ನೆಲಗಳನ್ನು ಭಾರತೀಯ ಸೇನೆ ಗುರುತಿಸಿದೆ. ಭಾರತದ ಟಾರ್ಗೆಟ್ ಗೊತ್ತಾಗುತ್ತಿದ್ದಂತೆಯೇ ಪಾಕ್​ ಸೇನೆ ಉಗ್ರರ ನೆಲೆಯಿಂದ ಅವರನ್ನು ಬೇರೆಡೆಗೆ ಶಿಫ್ಟ್ ಮಾಡಿದೆ ಎನ್ನಲಾಗಿದೆ. ಹೀಗಾಗಿ ಪಾಕ್​​ ಬಚ್ಚಿಟ್ಟಿರುವ ಎಲ್ಲಾ ಉಗ್ರರ ನೆಲೆ ಪತ್ತೆ ಹಚ್ಚುವ ಕೆಲಸವನ್ನು ಭಾರತೀಯ ಸೇನೆ ಮಾಡ್ತಿದೆ.

ಪಾಕಿಸ್ತಾನದ ಮೇಲೆ ದಾಳಿಗೆ ಸರ್ವ ಸನ್ನದ್ಧವಾಗಿರುವ ಇಂಡಿಯನ್ ಆರ್ಮಿ, ಯಾವ ಕಡೆಯಿಂದ ದಾಳಿ ಮಾಡುತ್ತೆ ಅನ್ನೋದು ಮಾತ್ರ ಸೀಕ್ರೇಟ್​ ಆಗಿ ಇಡಲಾಗಿದೆ. ಭೂ ಮಾರ್ಗ, ಜಲ ಮಾರ್ಗ, ವಾಯು ಮಾರ್ಗವೋ ಎಂಬುದು ಇನ್ನೂ ರಹಸ್ಯವಾಗಿದೆ. ಮಾಹಿತಿಗಳ ಪ್ರಕಾರ ಮೂರೂ ಕಡೆಯಿಂದಲೂ ಭಾರತ ದಾಳಿ ನಡೆಸಲಿದೆ ಎಂದು ಹೇಳಲಾಗಿದೆ. ಸದ್ಯ ಭಾರತವನ್ನು ಕೆಣಕಿ ಪಾಕಿಸ್ತಾನ ಹಾಗೂ ಉಗ್ರರು ವಿಲ ವಿಲ ಒದ್ದಾಡುತ್ತಿದ್ದಾರೆ.

ಇದನ್ನೂ ಓದಿ : ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ ‘ಕೊತ್ತಲವಾಡಿ’ – ಮಾಸ್ ಅವತಾರದಲ್ಲಿ ಪೃಥ್ವಿ ಅಂಬರ್!

Btv Kannada
Author: Btv Kannada

Read More