ಬೆಂಗಳೂರು : ಭೂಗತ ಲೋಕದ ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಅವರ ಮೇಲೆ ಏಪ್ರಿಲ್ 18ರಂದು ಬಿಡದಿ ಬಳಿ ಫೈರಿಂಗ್ ನಡೆದಿತ್ತು. ಘಟನೆಯಲ್ಲಿ ರಿಕ್ಕಿ ಮೂಗು ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿತ್ತು. ಇದರಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಿಕ್ಕಿ ರೈ ನಿನ್ನೆ ತಡರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಿಕ್ಕಿಗೆ ಖಾಕಿ ಶಾಕ್ ನೀಡಲು ಮುಂದಾಗಿದ್ದು, 35(3) ನೋಟಿಸ್ ನೀಡಲು ಬಿಡದಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ ರಿಕ್ಕಿ ಸದಾಶಿವನಗರದ ಮನೆಗೆ ತೆರಳಿದ್ದಾರೆ. ಫೈರಿಂಗ್ ಪ್ರಕರಣದಲ್ಲಿ ಈಗಾಗ್ಲೇ ರಿಕ್ಕಿ ಬಾಡಿಗಾರ್ಡ್ ಮನ್ನಪ್ಪ ವಿಠ್ಠಲನನ್ನ ಬಂಧಿಸಲಾಗಿದೆ. ಆದ್ರೆ, ವಿಠ್ಠಲ ವಿಚಾರಣೆಗೆ ಸರಿಯಾಗಿ ಸಹಕರಿಸ್ತಿಲ್ಲ. ಘಟನೆ ನಡೆದ ದಿನ ರಾತ್ರಿ 9:30ಕ್ಕೆ ಕ್ವಾಟ್ರದಸ್ಗೆ ಹೋಗಿದ್ದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದ್ರೆ, ಸಿಸಿಟಿವಿ ಫೂಟೇಜ್ನಲ್ಲಿ 9:30 ರಿಂದ 10 ಗಂಟೆಯವರೆಗೆ ರಿಕ್ಕಿ ಜೊತೆ ಇರೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
ಅದೇ ರೀತಿ 10 ಗಂಟೆಗೆ ಕ್ವಾಟ್ರಸ್ಗೆ ಹೋದ ವಿಠ್ಠಲ ಮತ್ತೆ 11:30ಕ್ಕೆ ರಿಕ್ಕಿ ರೈನ ಮುಂದಿದ್ದ. 11:30 ರಿಂದ 12 ಗಂಟೆ ವರೆಗೆ ರಿಕ್ಕಿ ಜೊತೆ ವಿಠ್ಠಲ ಡೀಪ್ ಡಿಸ್ಕಷನ್ ಕೂಡ ಮಾಡಿದ್ದ. ರಾತ್ರಿ 10:58ರ ಸುಮಾರಿನಲ್ಲಿ ಸಿಸಿಟಿವಿಯಲ್ಲಿ ಗನ್ ಫೈಯರ್ ಆಗಿರೋ ಆಡಿಯೋ ಕೂಡ ಲಭಿಸಿತ್ತು. ಆದ್ರೆ, ಮೊದಲ ಫೈರಿಂಗ್ ಮಿಸ್ ಫಯರ್ ಆಗಿತ್ತು. ಅದೇ ಕಾರಣಕ್ಕಾಗಿ ವಿಠ್ಠಲನನ್ನ ಮತ್ತೆ ರಿಕ್ಕಿ ಕರೆಸಿಕೊಂಡ್ಡಿದ್ದ.
ಹೌದು.. ಸ್ವಾಮಿನಿಷ್ಠೆ ತೋರೋ ಕೆಲಸವನ್ನ ವಿಠ್ಠಲ ಮಾಡಿದ್ದಾನೆ. ಖಾಕಿ ಏನೇ ಕೇಳಿದ್ರೂ ನಾನು ಡ್ಯೂಟಿ ಮುಗಿಸ್ಕೊಂಡು ಕ್ವಾಟ್ರಸ್ಗೆ ಹೋಗಿ ಎಣ್ಣೆ ಹೊಡೆದು ಮಲಗಿದ್ದೆ ಎಂದು ಹೇಳಿದ್ದಾನೆ. ಸಿಸಿಟಿವಿ ಸಾಕ್ಷಿ ಇದ್ಯಲ್ಲಪ್ಪ ಅಂದ್ರೆ.. ಹೌದು, ರಿಕ್ಕಿ ಕರೆದಿದ್ರು, ರೈಯವ್ರ ವಿಲ್ಲಾ ರಿನೋವೇಷನ್ ಇತ್ತು. ಅದಕ್ಕೆ ಕರೆದ್ರು, ಲೇಬರ್ಗಳೆಷ್ಟು ಅವರ ದಿನದ ಕೂಲಿ ಬಗ್ಗೆ ಮಾತಾಡಿದ್ರು ಅಂತಷ್ಟೇ ಹೇಳಿ ವಿಠ್ಠಲ ತಣ್ಣಗಾಗಿದ್ದಾನೆ. ಇದೆಲ್ಲಾ ಪಕ್ಕಾ ಪ್ಲ್ಯಾನ್ಡ್ ಫೈರಿಂಗ್ ಅನ್ನೋದು ಪೊಲೀಸರಿಗೆ ಗೊತ್ತು. ಆದ್ರೆ, ಫೈರಿಂಗ್ಗೆ ಸರಿಯಾದ ಸಾಕ್ಷ್ಯಾಧಾರ ಲಭಿಸ್ತಿಲ್ಲ. ಅದಕ್ಕಾಗಿ ಇಂದು ಬಿಡದಿ ಪೊಲೀಸರು ರಿಕ್ಕಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಿದ್ದಾರೆ.
ಇದನ್ನೂ ಓದಿ : ಕೋಲ್ಕತ್ತಾದ ಹೋಟೆಲ್ನಲ್ಲಿ ಭಾರೀ ಬೆಂಕಿ ಅವಘಡ – 14 ಮಂದಿ ಸಜೀವ ದಹನ!
