ಬ್ರಹ್ಮದೇವರಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಸಚಿವ ಚಲುವರಾಯಸ್ವಾಮಿ ಪುತ್ರ ಸಚಿನ್​ ಅವಿರೋಧ ಆಯ್ಕೆ!

ನಾಗಮಂಗಲ : ಸಚಿವ ಎನ್​​. ಚಲುವರಾಯಸ್ವಾಮಿ ಪುತ್ರ ಸಚಿನ್​ ಅವರು ಬ್ರಹ್ಮದೇವರಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ನಾಗಮಂಗಲ ತಾಲ್ಲೂಕಿನ ಬ್ರಹ್ಮದೇವರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಸರ್ವಾನುಮತದಿಂದ ಸಚಿನ್ ಅವರನ್ನು​ ಆಯ್ಕೆ ಮಾಡಿದ್ದಾರೆ.

ಬ್ರಹ್ಮದೇವರಹಳ್ಳಿ ಸಹಕಾರ ಸಂಘದ ಕಾಂಗ್ರೆಸ್​ ಬೆಂಬಲಿತ 12 ನಿರ್ದೇಶಕರು ಸಚಿನ್ ಅವರನ್ನು ಆಯ್ಕೆ ಮಾಡಿದ್ದು, ನೇರ ಚುನಾವಣೆ ಮೂಲಕ ಜನರ ಸೇವೆಗೆ ಸಚಿನ್ ಚಲುವರಾಯಸ್ವಾಮಿ ಇಳಿದ್ದಾರೆ. ಜನರಿಂದ ಆಯ್ಕೆಯಾಗಿ ಸಾರ್ವಜನಿಕ ಸೇವೆಗೆ ಚಲುವರಾಯಸ್ವಾಮಿ ಪುತ್ರ ಸಚಿನ್ ಮುಂದಾಗಿದ್ದಾರೆ.

ಇನ್ನು, ನಾಗಮಂಗಲ ವಿಧಾನಸಭಾ ಕ್ಷೇತ್ರದಾದ್ಯಂತ ಜನರೊಂದಿಗೆ ಸಚಿನ್ ನಿರಂತರವಾಗಿ ಓಡಾಟ ನಡೆಸುತ್ತಿದ್ದು, ವಾರದಲ್ಲಿ ಮೂರರಿಂದ ನಾಲ್ಕು ದಿನ ನಾಗಮಂಗಲದಲ್ಲಿ ಇರುತ್ತಿದ್ದಾರೆ. ನಾಗಮಂಗಲದಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಕಾರ್ಯಕ್ರಮಗಳು, ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇದರ ಮುಂದುವರಿದ ಭಾಗವಾಗಿ ಮುಂದಿನ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸಚಿನ್​ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಮೂಲಕ ತಂದೆ ಚಲುವರಾಯಸ್ವಾಮಿಯವರ ಸ್ಥಾನವನ್ನು ಪುತ್ರ ಸಚಿನ್ ಸಮರ್ಥವಾಗಿ ತುಂಬಲಿದ್ದಾರೆ.

ಇದನ್ನೂ ಓದಿ : ಸಾಲ ವಸೂಲಿಗೆ ಬಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ ಯತ್ನ – ಆರೋಪಿ ಅರೆಸ್ಟ್​!

Btv Kannada
Author: Btv Kannada

Read More