ದುರಹಂಕಾರಿ ಸಬ್ ಇನ್ಸ್​ಪೆಕ್ಟರ್ ವರ್ಷ ಕರ್ಮಕಾಂಡ!

ಬೆಂಗಳೂರು : ಗೃಹ ಸಚಿವರೇ.. ನಿಮ್ಮ ಇಲಾಖೆಯ ಮೇಲೆ ನಿಮಗೆ ಕಂಟ್ರೋಲ್ ಇಲ್ವಾ. ರಾಜ್ಯದಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣಗಳು ಒಂದಲ್ಲ ಒಂದರಂತೆ ವರದಿ ಆಗುತ್ತಲೇ ಇವೆ. ಇದೀಗ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಸಾರ್ವಜನಿಕರ ಮೇಲೆ ಪೊಲೀಸರು ದೌರ್ಜನ್ಯ ಮೆರೆದಿದ್ದಾರೆ. ಅಧಿಕಾರವಿದೆ ಎಂದು ಒಬ್ಬ ತಾಯಿಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಎಷ್ಟು ಸರಿ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡ ಕೊಳ್ಳೇಗಾಲ ಇನ್ಸ್ಪೆಕ್ಟರ್ ವರ್ಷ ಅವರನ್ನು ಸಸ್ಪೆಂಡ್ ಮಾಡ್ಬೇಕು.

ಪಟ್ಟಣ ಠಾಣೆಯ ಮಹಿಳಾ ಸಬ್ ಇನ್ಸ್​ಪೆಕ್ಟರ್ ವರ್ಷ ಗಲಾಟೆಯೊಂದರಲ್ಲಿ ಆರೋಪಿಯಾಗಿರುವ ದುಶ್ಯಂತ್ ಬುದ್ಧನನ್ನು ಬಂಧಿಸಲು ಹೋಗಿದ್ದರು. ಆರೋಪಿಯ ಮನೆಯ ಮುಂದೆ ಹೋಗಿ ತಾಯಿ ರಾಧಿಕಾರವರನ್ನು ಬೆದರಿಸಿ ಎಲ್ಲಿ ನಿನ್ನ ಮಗ, ಏನು ಅಂತ ಹೆತ್ತಿದ್ದೀಯ, ನಿನ್ನ ಮಗ ಸಿಗದಿದ್ದರೆ ನಿನ್ನನ್ನ ಒದ್ದು ಎಳೆದುಕೊಂಡು ಹೋಗುತ್ತೇನೆ. ಹೆಚ್ಚಿಗೆ ಮಾತನಾಡಿದರೆ ನಿನ್ನ ಮಗನನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು PSI ವರ್ಷ ಮನೆಯ ಮುಂದೆ ನಿಂತು ಅವಾಚ್ಯ ಶಬ್ದಗಳಿಂದ ಬೈದು ಎಲ್ಲರ ಮುಂದೆ ಮರ್ಯಾದೆ ಕಳೆದಿದ್ದಾರೆ.

ನಾನು ದಿನಕ್ಕೆ ಎರಡು ಬಾರಿ ಬರುತ್ತೇನೆ ಬೀದಿಯಲ್ಲಿ ನಿನ್ನ ಮರ್ಯಾದೆ ಕಳೆಯುತ್ತೇನೆ ಎಂದು PSI ವರ್ಷ ಬೆದರಿಕೆ ಹಾಕಿದ್ದರು. ನಿಂದನೆಯಿಂದ ಮನನೊಂದ ತಾಯಿ ಪಿಎಸ್ಐ ಮೇಡಂ ಬೀದಿಯಲ್ಲಿ ನನ್ನ ಮಾನ ಮರ್ಯಾದೆ ಕಳೆದು ನಿನ್ನನ್ನು ಗುಂಡಿಗೆ ಕೊಲ್ಲುತ್ತೇನೆ ಎಂದು ಎಲ್ಲರ ಮುಂದೆ ಅವಾಚ್ಯ ಶಬ್ದಗಳಿಂದ ನನ್ನನ್ನು ನಿಂದಿಸಿದ್ದಾರೆ ಎಂದು ಮಗನ ಮುಂದೆ ಕಣ್ಣೀರಿಟ್ಟಿದ್ದಾಳೆ. ತಾಯಿಯ ಕಣ್ಣೀರನ್ನು ಕಂಡ ಮಗ ದುಶ್ಯಂತ್ ಬುದ್ಧ ಮನನೊಂದು ಆರ್​ಎಂಸಿ ಆವರಣದಲ್ಲಿ ವಿಷ ಸೇವಿಸಿ ಅಸ್ವಸ್ಥನಾಗಿದ್ದನು. ಇದನ್ನು ಗಮನಿಸಿದ ಸ್ನೇಹಿತರು ಪಟ್ಟಣದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರಾದ ಡಾ. ಟೀನಾ ರವರು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಕೊಳ್ಳೇಗಾಲ ಪಟ್ಟಣದ ಜಿಪಿ ಮಲ್ಲಪ್ಪ ಪುರಂ ಬಡಾವಣೆಯ ನಿವಾಸಿ ಕೆಕೆ ಮೂರ್ತಿ ಮತ್ತು ರಾಧಿಕಾ ದಂಪತಿಗಳ ಮಗ ದುಷ್ಯಂತ್ ಬುದ್ಧ ವಿಷ ಸೇವಿಸಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಆರೋಪಿ ತಾಯಿ ಮಾಧ್ಯಮದ ಮುಂದೆ ಕಣ್ಣೀರಿಡುತ್ತಾ ತನ್ನ ಕಷ್ಟವನ್ನು ತಿಳಿಸಿದ್ದಾರೆ.

ಇದನ್ನೂ ಓದಿ : ಮೂವರು ಅಡಿಷನಲ್ ಎಸ್​ಪಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ!

Btv Kannada
Author: Btv Kannada

Read More