ಬೆಟ್ಟದ ತಿರುವಿನಲ್ಲಿ KSRTC ಬಸ್ ಬ್ರೇಕ್​ ಫೇಲ್​ – ಪ್ರಾಣಾಪಾಯದಿಂದ ಪಾರಾದ 60 ಪ್ರಯಾಣಿಕರು!

ಚಾಮರಾಜನಗರ : ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ KSRTC ಬಸ್​ ಬ್ರೇಕ್​ ಫೇಲ್​ ಆಗಿದ್ದು, ಕೂಡಲೇ ಎಚ್ಚೆತ್ತ ಡ್ರೈವರ್​​​ ಬಸ್​​ನ್ನು ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಇದರಿಂದ ಬಸ್​ ನಿಂತುಕೊಂಡಿದ್ದು, ಅದೃಷ್ಟವಶಾತ್ ಬಸ್​ನಲ್ಲಿದ್ದ 60ಕ್ಕೂ ಹೆಚ್ಚು ಜನರು ಬಚಾವ್ ಆಗಿದ್ದಾರೆ.

KA 09 F 5311 ಸಂಖ್ಯೆಯ ಮೈಸೂರು ಡಿಪೋದ KSRTC ಬಸ್, ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಈ ವೇಳೆ ಮಲೆ ಮಹದೇಶ್ವರಬೆಟ್ಟದ ತಾಳಬೆಟ್ಟ ತಿರುವಿನಲ್ಲಿ ಬ್ರೇಕ್ ಫೇಲ್ ಆಗಿದೆ. ಬ್ರೇಕ್ ಫೇಲ್ ಆಗ್ತಿದ್ದಂತೆ ಬಸ್​ನ್ನು ಡಿವೈಡರ್ ಮೇಲೆ ಏರಿಸಿದ್ದಾನೆ. ಆಗ ಬಸ್ ನಿಂತುಕೊಂಡಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ 60 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ : ಟ್ರೇಲರ್​ನಲ್ಲೇ ಕುತೂಹಲ ಮೂಡಿಸಿದ “ಗ್ರೀನ್” ಸಿನಿಮಾ!

Btv Kannada
Author: Btv Kannada

Read More