ಪಾಕಿಸ್ತಾನ ಜೊತೆ ಯುದ್ಧನೇ ಬೇಡ ಎಂದಿಲ್ಲ – ಯೂಟರ್ನ್​ ಹೊಡೆದ ಸಿಎಂ ಸಿದ್ದು!

ಬೆಂಗಳೂರು : ಪಹಲ್ಗಾಮ್‌ನಲ್ಲಿ ಉಗ್ರರ ಭೀಕರ ದಾಳಿ ಬಳಿಕ ಪ್ರತೀಕಾರದ ಕೂಗು ಭಾರತದಲ್ಲಿ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಪಾಕಿಸ್ತಾನದ ಟಿವಿಗಳಲ್ಲಿ ಪ್ರಸಾರವಾಗಿದೆ.

ಪಾಕಿಸ್ತಾನದ ಮೇಲೆ ಭಾರತ ಯುದ್ಧ ಮಾಡಬಾರದು ಎಂದ ಸಿದ್ದರಾಮಯ್ಯನವರ ಹೇಳಿಕೆಯನ್ನು ಪಾಕಿಸ್ತಾನ ಮೀಡಿಯಾಗಳು ಸುದ್ದಿ ಪ್ರಸಾರ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷ ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಇನ್ನು ಇದಕ್ಕೆ ಇದೀಗ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನಾನೆಲ್ಲಿ ಯುದ್ಧ ಬೇಡ ಎಂದು ಹೇಳಿದ್ದೇನೆ ? ಅವ್ರಿಗೂ ಬುದ್ದಿ ಇಲ್ಲ, ಯುದ್ದದಿಂದ ಪರಿಹಾರ ಆಗಲ್ಲ. ಪಾಕಿಸ್ತಾನ ಜೊತೆ ಯುದ್ಧನೇ ಮಾಡೋದು ಬೇಡ ಎಂದಿಲ್ಲ, ಅಲ್ಲಿಗೆ ಭದ್ರತೆ ಕೊಡ್ಬೇಕಾಗಿತ್ತಲ್ವಾ? ಭದ್ರತಾ ವೈಫಲ್ಯವಾಗಿದೆ. ಇಂಟೆಲಿಜೆನ್ಸ್ ಫೇಲ್ ಆಗಿದೆ, ಸೆಕ್ಯುರಿಟಿ ಕೊಟ್ಟಿಲ್ಲ ಅಂದಿದ್ದೀನಿ.
ಸದ್ಯಕ್ಕೆ ಯುದ್ದ ಬೇಡ ಅಂದಿದ್ದೀನಿ ಅಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಪಹಲ್ಗಾಮ್‌ನಲ್ಲಿ ಹತ್ಯೆಯಾದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ – ಸರ್ಕಾರಿ ಉದ್ಯೋಗ ಘೋಷಣೆ!

Btv Kannada
Author: Btv Kannada

Read More

Read More