ಬೆಂಗಳೂರು : ಪಾಕ್ ಜೊತೆ ಯುದ್ಧ ಬೇಡ ಅಂತ ಶಾಂತಿಯ ಸಂದೇಶ ಸಾರಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ವರ್ಲ್ಡ್ ಫೇಮಸ್ ಆಗಿದ್ದಾರೆ.
ಹೌದು.. ಪಹಲ್ಗಾಮ್ ದಾಳಿ ಬಳಿಕ ಕೇಂದ್ರ ಸರ್ಕಾರ ಹಲವು ರಾಜತಾಂತ್ರಿಕ ನಿರ್ಧಾರ ಪ್ರಕಟಿಸಿದೆ. ಕರ್ನಾಟಕದಲ್ಲೂ ಪಾಕ್ತಿಸ್ತಾನಕ್ಕೆ ಸಂಬಂಧಿಸಿದ ಜನರನ್ನು ಅವರ ದೇಶಕ್ಕೆ ಕಳುಹಿಸುವಂತೆ ಸೂಚನೆ ನೀಡಿಲಾಗಿದೆ. ಇದನ್ನು ನಾವು ಪಾಲಿಸುತ್ತೇವೆ. ಪಾಕಿಸ್ತಾನದ ಮೇಲೆ ಅನಗತ್ಯ ಯುದ್ಧ ಬೇಡ ಎಂದಿರುವ ಸಿಎಂ ಸಿದ್ದರಾಮಯ್ಯ ಅವರು ಪಾಕ್ ಮಾಧ್ಯಮಗಳಲ್ಲಿ ಇದೀಗ ಭಾರೀ ಸುದ್ದಿಯಾಗಿದ್ದಾರೆ.
ಪಾಕ್ ಟಿವಿಗಳಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಸುದ್ದಿ ಪ್ರಸಾರವಾಗಿದ್ದು, ಪಹಲ್ಗಾಮ್ ಉಗ್ರರ ದಾಳಿ ಕುರಿತಂತೆ ಸಿದ್ದರಾಮಯ್ಯ ನೀಡಿದ್ದ ಪ್ರತಿಕ್ರಿಯೆ ಇದೀಗ ಪಾಕಿಸ್ತಾನದ ಪ್ರಮುಖ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಹೇಳಿದ್ದೇನು, ಪ್ರಸಾರವಾಗಿದ್ದೇನು? ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯದಿಂದ ಪಾಕಿಸ್ತಾನ ಜನರನ್ನು ಹೊರ ಕಳುಹಿಸುವ ಸೂಚನೆ ಪಾಲಿಸುತ್ತೇವೆ. ರಾಜ್ಯದಲ್ಲಿ ಎಷ್ಟು ಪಾಕಿಸ್ತಾನ ಜನರಿದ್ದಾರೆ ಎಂಬ ಮಾಹಿತಿ ಇಲ್ಲ. ಬೆಂಗಳೂರಿನಲ್ಲಿ ಹೆಚ್ಚಿರುವ ಸಾಧ್ಯತೆ ಇದೆ. ಪಾಕಿಸ್ತಾನ ಮೇಲೆ ಅನಗತ್ಯ ಯುದ್ಧ ಬೇಡ. ದೇಶದ ಭದ್ರತೆ ಬಿಗಿ ಪಡಿಸಿಕೊಳ್ಳಿ. ಅಲ್ಲಿ ಭದ್ರತಾ ವೈಫಲ್ಯವಾಗಿದೆ. ಭದ್ರತೆ ಇದೆ ಎಂದು ಕೇಂದ್ರ ಜನರಿಗೆ ಟೋಪಿ ಹಾಕಿದೆ. ಹಾಗಾದ್ರೆ ಬಿಜೆಪಿಯವರು ಇಷ್ಟು ದಿನ ಮಾಡಿದ್ದು ಭಾಷಣವಾ ಎಂದು ಗಡಿ ಭದ್ರತೆ ವೈಫಲ್ಯ ಕುರಿತು ಸಿದ್ದರಾಮಯ್ಯ ತಿಳಿಸಿದ್ದಾರೆ.
ಪಾಕ್ ಮೇಲೆ ಯುದ್ಧ ಬೇಡ ಎಂಬ ಸಿಎಂ ಹೇಳಿಕೆ ಪಾಕ್ ಟಿವಿ ಮಾಧ್ಯಮಗಳಗಳಲ್ಲಿ ಫುಲ್ ವೈರಲ್ ಆಗಿದೆ. ಅದರ ವಿಡಿಯೋ ತುಣಕೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ : ಇಂದು ಆರ್ಸಿಬಿ-ಡೆಲ್ಲಿ ಹೈವೋಲ್ಟೇಜ್ ಕದನ.. ಸೇಡು ತೀರಿಸಿಕೊಳ್ಳುವ ತವಕದಲ್ಲಿ ಬೆಂಗಳೂರು ಬಾಯ್ಸ್!
