ಚಿಕ್ಕಬಳ್ಳಾಪುರ : ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಅಮಾನಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ನೀರು ಹರಿಸುವ ಯೋಜನೆಯ ವಿವಾದ ಸದ್ಯ ಭುಗಿಲೆದ್ದಿದ್ದು, ಯಾವುದೇ ಕಾರಣಕ್ಕೂ ಕೆರೆ ನೀರನ್ನು ಗೌರಿಬಿದನೂರಿಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದು ಕೆರೆ ಅಚ್ಚುಕಟ್ಟುದಾರರು ಪಟ್ಟುಹಿಡಿದಿದ್ದಾರೆ.
ಅಮಾನಿ ಕೆರೆ ನೀರು ಉಳಿವಿಗಾಗಿ ಊರಿನ ರೈತರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಅದೇ ರೀತಿ ನಿನ್ನೆ ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಹೋರಾಟ ಸಮಿತಿಯಿಂದ ಪಂಜಿನ ಮೆರವಣಿಗೆ ಮಾಡಿ ಗೌರಿಬಿದನೂರು MLA ಪುಟ್ಟಸ್ವಾಮಿ ಗೌಡ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಾಟದಹೊಸಹಳ್ಳಿ ಗ್ರಾಮದಿಂದ ಕೆರೆ ವರೆಗೆ ಪಂಜಿನ ಮೆರವಣಿಗೆ ಮಾಡಲಾಗಿದ್ದು, ಗ್ರಾಮದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕೆರೆಯವರೆಗೆ ಪಂಜುಗಳನ್ನ ಹಿಡಿದು ರೈತರು ಪಾದಯಾತ್ರೆ ನಡೆಸಿದ್ದಾರೆ.
ವಾಟದಹೊಸಹಳ್ಳಿ ಕೆರೆ ನೀರು ನೂರಾರು ಹಳ್ಳಿಗಳಿಗೆ ಜೀವನಾಡಿಯಾಗಿದೆ. ಹೀಗಾಗಿ ಕೆರೆ ನೀರನ್ನ ಗೌರಿಬಿದನೂರು ನಗರಕ್ಕೆ ಕುಡಿಯವ ನೀರಿನ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಂಜಿನ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಬೇರೆ ಕಡೆಗೆ ಕೆರೆ ನೀರನ್ನ ಬಿಡುವುದಿಲ್ಲ ಎಂದು ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಜೊತೆ ವಕ್ಫ್ ಪ್ರೊಟೆಸ್ಟ್ನಲ್ಲಿ ಭಾಗಿ – ಬಿಜೆಪಿಯಿಂದ ರೌಫೊದ್ದೀನ್ ಕಚೇರಿವಾಲೆ ಆರು ವರ್ಷ ಉಚ್ಚಾಟನೆ!
