ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಜಯದ ನಗೆ ಬೀರಿದೆ. 2025ರಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ತವರಿನ ಅಭಿಮಾನಿಗಳ ಮುಂದೆ RCB ನಿರಾಶೆಯನುಭವಿಸಿತ್ತು. ಆದರೆ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್ಗಳ ರೋಚಕ ಜಯ ಸಾಧಿಸಿದೆ.
ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ್ ತಂಡಕ್ಕೆ ಗೆಲ್ಲಲು 18 ರನ್ಗಳ ಅಗತ್ಯವಿತ್ತು. ಆದರೆ ಜೋಶ್ ಹೆಜಲ್ವುಡ್ 19ನೇ ಓವರ್ನಲ್ಲಿ ಕೇವಲ 1ರನ್ ನೀಡಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಆಪತ್ಬಾಂಧವನಾದದರು. ಕೊನೆಯ ಓವರ್ನಲ್ಲಿ ಯಶಸ್ ದಯಾಳ್ ಕೇವಲ 5 ರನ್ ನೀಡಿ ಆರ್ಸಿಬಿಗೆ 11 ರನ್ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 49 ಹಾಗೂ ಧ್ರುವ್ ಜುರೆಲ್ 33 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ 47 ರನ್ಗಳಿಸಿದರಾದರೂ, ಇವರ ಆಟ ತಂಡವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ನಿತೀಶ್ ರಾಣಾ 28, ರಿಯಾನ್ ಪರಾಗ್ 22, ವೈಭವ್ ಸೂರ್ಯವಂಶಿ 16, ಹೆಟ್ಮೆಯರ್ 11, ಶುಭಂ ದುಬೆ 12 ರನ್ಗಳಿಸಿದರು.
ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್ 33ಕ್ಕೆ 4, ಯಶ್ ದಯಾಳ್ 33ಕ್ಕೆ1, ಭುವನೇಶ್ವರ್ ಕುಮಾರ್ 50ಕ್ಕೆ1 ಹಾಗೂ ಕೃನಾಲ್ ಪಾಂಡ್ಯ 31ಕ್ಕೆ2 ವಿಕೆಟ್ ಪಡೆದರು ಮಿಂಚಿದರು.
ಇದನ್ನೂ ಓದಿ : ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ!
