RCBಗೆ ಆಪತ್ಬಾಂಧವನಾದ ಹೆಜಲ್​ವುಡ್​ – ಪಂದ್ಯದ ಗತಿಯನ್ನೇ ಬದಲಿಸಿದ 19ನೇ ಓವರ್.. ಚಿನ್ನಸ್ವಾಮಿಯಲ್ಲಿ RR ಮುಗ್ಗರಿಸಿದ್ದೇಗೆ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೊನೆಗೂ ಜಯದ ನಗೆ ಬೀರಿದೆ. 2025ರಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡು ತವರಿನ ಅಭಿಮಾನಿಗಳ ಮುಂದೆ RCB ನಿರಾಶೆಯನುಭವಿಸಿತ್ತು. ಆದರೆ ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 11 ರನ್​ಗಳ ರೋಚಕ ಜಯ ಸಾಧಿಸಿದೆ.

ಕೊನೆಯ 12 ಎಸೆತಗಳಲ್ಲಿ ರಾಜಸ್ಥಾನ್​ ತಂಡಕ್ಕೆ ಗೆಲ್ಲಲು 18 ರನ್​ಗಳ ಅಗತ್ಯವಿತ್ತು. ಆದರೆ ಜೋಶ್ ಹೆಜಲ್​ವುಡ್​ ​19ನೇ ಓವರ್​​ನಲ್ಲಿ ಕೇವಲ 1ರನ್​ ನೀಡಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಆಪತ್ಬಾಂಧವನಾದದರು. ಕೊನೆಯ ಓವರ್​​ನಲ್ಲಿ ಯಶಸ್​ ದಯಾಳ್​​ ಕೇವಲ 5 ರನ್​ ನೀಡಿ ಆರ್​ಸಿಬಿಗೆ 11 ರನ್​ಗಳ ರೋಚಕ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಆರ್​​ಸಿಬಿ ಅಂಕಪಟ್ಟಿ 12 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 19 ಎಸೆತಗಳಲ್ಲಿ 49 ಹಾಗೂ ಧ್ರುವ್ ಜುರೆಲ್ 33 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ 47 ರನ್​ಗಳಿಸಿದರಾದರೂ, ಇವರ ಆಟ ತಂಡವನ್ನು ಗೆಲುವಿನ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ನಿತೀಶ್ ರಾಣಾ 28, ರಿಯಾನ್ ಪರಾಗ್ 22, ವೈಭವ್ ಸೂರ್ಯವಂಶಿ 16, ಹೆಟ್ಮೆಯರ್ 11, ಶುಭಂ ದುಬೆ 12 ರನ್​​ಗಳಿಸಿದರು.

ಆರ್​​ಸಿಬಿ ಪರ ಜೋಶ್ ಹ್ಯಾಜಲ್​ವುಡ್ 33ಕ್ಕೆ 4, ಯಶ್ ದಯಾಳ್ 33ಕ್ಕೆ1, ಭುವನೇಶ್ವರ್ ಕುಮಾರ್ 50ಕ್ಕೆ1 ಹಾಗೂ ಕೃನಾಲ್ ಪಾಂಡ್ಯ 31ಕ್ಕೆ2 ವಿಕೆಟ್ ಪಡೆದರು ಮಿಂಚಿದರು.

ಇದನ್ನೂ ಓದಿ : ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ!

Btv Kannada
Author: Btv Kannada

Read More