ಬೆಂಗಳೂರು : ದಾಸರಹಳ್ಳಿ ಬಿಬಿಎಂಪಿ ವಲಯದಲ್ಲಿ ನಕಲಿ ಕಾಮಗಾರಿ ಹೆಸರಿನಲ್ಲಿ ನಡೆದಿರುವ 25 ಕೋಟಿ ಲೂಟಿ ಕರ್ಮಕಾಂಡವನ್ನು ದಾಸರಹಳ್ಳಿ ಮಾಜಿ MLA ಹಾಗೂ ಹಾಲಿ ಕಾಂಗ್ರೆಸ್ ಮುಖಂಡ ಆರ್. ಮಂಜುನಾಥ್ ಅವರು ಬಯಲಿಗೆಳೆದಿದ್ದಾರೆ. ಅಭಿಜಿತ್ ಮತ್ತು ತೇಜೇಗೌಡ ಎಂಬ ಇಬ್ಬರು ಕಂಟ್ರಾಕ್ಟರ್ಗಳು ಮತ್ತು ಸಬ್ ಕಾಂಟ್ರಾಕ್ಟರ್ ನಾರಾಯಣಗೌಡ ಎಂಬವರು ದಾಸರಹಳ್ಳಿ ಎಕ್ಸಿಕ್ಯೂಟಿವ್ ಇಂಜಿನಿಯರ್ KM ಯದುಕೃಷ್ಣ ಸೇರಿಕೊಂಡು ಲೂಟಿ ಹೊಡೆದಿರುವ 25 ಕೋಟಿ ಕರ್ಮಕಾಂಡ ಇದೀಗ ಇಂಚಿಚೂ ಬಹಿರಂಗವಾಗಿದೆ.

ಹೌದು.. ರಾಜ್ಯ ಸರ್ಕಾರ ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾಸರಹಳ್ಳಿ ವಲಯದ ಈ ಹಳ್ಳಿಗಳ ಅಭಿವೃದ್ಧಿಗಾಗಿ 25 ಕೋಟಿ ವಿಶೇಷ ಅನುದಾನವನ್ನು ಎರಡು ವರ್ಷದ ಹಿಂದೆ ಮಂಜೂರು ಮಾಡಿತ್ತು. ಇದನ್ನು ವಿಶೇಷವಾಗಿ ಹೊಸದಾಗಿ ಸೇರ್ಪಡೆಯಾದ ಹಳ್ಳಿಗಳ ಮೂಲಸೌಕರ್ಯ ಅಂದರೆ ರಸ್ತೆ ಒಳಚರಂಡಿ ನಿರ್ಮಿಸಲು ಬಳಸಬೇಕಾಗುತ್ತದೆ. ಇದಕ್ಕಾಗಿ ಕಡ್ಡಾಯ ಸರ್ಕಾರದ ಆದೇಶವೂ ಇರುತ್ತದೆ.
ಆದ್ರೆ, ಅಭಿಜಿತ್, ತೇಜೇಗೌಡ ನಾರಾಯಣ ಗೌಡ ಮತ್ತು ಇಂಜಿನಿಯರ್ ಯದುಕೃಷ್ಣ ಸೇರಿಕೊಂಡು ಈ ಹಣವನ್ನೇಲ್ಲಾ ಲೂಟಿ ಮಾಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಅನುಮೋದನೆ ಮಾಡಿಕೊಡುವ ಮೊದಲೇ ವರ್ಕ್ ಆರ್ಡರ್ ಕೊಟ್ಟು, ಪಿಎಂಸಿ ಅನುಮೋದನೆ ಮೊದಲೇ ಮುಖ್ಯ ಕಂಟ್ರಾಕ್ಟರ್ಗೆ ವರ್ಕ ಆರ್ಡರ್ ಕೊಡಿಸಿದ್ದಾರೆ.
110 ಹಳ್ಳಿಗಳ ಬದಲು ಕಾಲಿ ಇರುವ ಬಿಬಿಎಂಪಿ ಜಾಗದಲ್ಲಿ ರಸ್ತೆ ಮತ್ತು ಒಳಚರಂಡಿ ಮಾಡಿಸಿ ಕೇವಲ ಒಂದು ತಿಂಗಳ ಅವಧಿಯಲ್ಲಿ 10 ಕೋಟಿ ಕೆಲಸ ಮುಗಿದಿದೆ ಎಂದು ನಕಲಿ ಬಿಲ್ ಬರೆಸಿದ್ದಾರೆ. ಎಲ್ಲೂ ಕೆಲಸವೇ ಮಾಡದೆ ನಕಲಿ ಬಿಲ್ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದರೂ ಕೂಡ ಯಾವುದೇ ದೂರು ದಾಖಲಾಗಿಲ್ಲ ಅಂತ ಸುಳ್ಳು ಬಿಲ್ ಕೂಡ ಬರೆಸಲಾಗಿದೆ.
ಒಟ್ಟರೆ ಬಿಬಿಎಂಪಿ ದಾಸರಹಳ್ಳಿ ವಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್ ಯದುಕೃಷ್ಣ ಮೂವರು ಕಂಟ್ರಾಕ್ಟರ್ಗಳಾದ ಅಭಿಜಿತ್, ತೇಜೇಗೌಡ ಮತ್ತು ನಾರಾಯಣಗೌಡ ಜೊತೆ ಸೇರಿ ಕೆಲಸವೇ ಮಾಡದೆ 25 ಕೋಟಿ ಕೆಲಸಕ್ಕೆ ನಕಲಿ ಬಿಲ್ ಸೃಷ್ಟಿಸಿದ್ದಾರೆ. ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಕಡೆಗೆ 12 ಕೋಟಿ ಬಿಲ್ಲನ್ನು ಪಡೆದಿದ್ದಾರೆ.
ಇದೀಗ ಈ ಕಾಮಗಾರಿಯಲ್ಲಿ ಕೋಟಿ ಕೋಟಿ ಲೂಟಿ ನಡೆದಿದೆ ಎಂದು ಮಾಜಿ MLA ಹಾಗೂ ಹಾಲಿ ಕಾಂಗ್ರೆಸ್ ಮುಖಂಡ ಆರ್. ಮಂಜುನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿದ ಕೂಡಲೇ ಆರೋಪ ಸಾಬೀತಾಗಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಯದುಕೃಷ್ಣ ಎತ್ತಂಗಡಿ ಆಗಿದ್ದಾರೆ. ಇದೀಗ ಕಂಟ್ರಾಕ್ಟರ್ಗಳಾದ ತೇಜೇಗೌಡ, ಅಭಿಜಿತ್, ನಾರಾಯಣಗೌಡ ಮತ್ತು ಯದುಕೃಷ್ಣ ಮೇಲೆ FIR ದಾಖಲಿಸಿ ಅರೆಸ್ಟ್ ಮಾಡಿ ಕೊಟ್ಟಿರುವ ಹಣವನ್ನು ವಾಪಸ್ ಪಡೆಯುವಂತೆ ಮುಖ್ಯ ಕಮಿಷನರಿಗೆ ಆರ್. ಮಂಜುನಾಥ್ ಅವರು ಒತ್ತಾಯಿಸಿದ್ದಾರೆ.
ಹೀಗಾಗಿ ಯಾವುದೇ ಕ್ಷಣದಲ್ಲಿ ಈ ನಾಲ್ವರ ವಿರುದ್ಧ ನಕಲಿ ಕಾಮಗಾರಿ ಹೆಸರಿನಲ್ಲಿ ಸರ್ಕಾರದ 12 ಕೋಟಿ ಲೂಟಿ ಪ್ರಕರಣದಲ್ಲಿ ಎಫ್ಐರಾಗಿ ಈ ನಾಲ್ವರು ಜೈಲು ಸೇರುವುದು ಖಚಿತವಾಗಿದೆ.
ಇದನ್ನೂ ಓದಿ : ಮಾಗಡಿಯಲ್ಲಿ ಬೆಂಗಳೂರಿನ 2ನೇ ಏರ್ಪೋರ್ಟ್ ಸಾಧ್ಯತೆ – ಜಮೀನು ಮಾಲೀಕರ ವಿರೋಧ!
