ಉಗ್ರರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಭರ್ಜರಿ ರೋಡ್ ಶೋ – ಸಾರ್ವಜನಿಕರಿಂದ ಆಕ್ರೋಶ!

ತುಮಕೂರು l ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ನಡೆದ ಉಗ್ರರ ದಾಳಿಯಲ್ಲಿ ಬಲಿಯಾದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಪಹಲ್ಗಾಮ್​ನಲ್ಲಿ ನರ ರಾಕ್ಷಸರ ಅಟ್ಟಹಾಸಕ್ಕೆ 3 ಕನ್ನಡಿಗರು ಸೇರಿ 26 ಮಂದಿ ಬಲಿಯಾಗಿದ್ದಾರೆ. ಈ ಘಟನೆಯಿಂದ ಇಡೀ ಭಾರತವೇ ಸದ್ಯ ಶೋಕಾಚರಣೆಯಲ್ಲಿದೆ. ಆದ್ರೆ ಗೃಹಮಂತ್ರಿ ಡಾ.ಜಿ ಪರಮೇಶ್ವರ್ ತವರಿನಲ್ಲಿ ಇನ್ಸ್‌ಪೆಕ್ಟರ್ ಒಬ್ಬರು ಯಾವುದೇ ನೋವಿಲ್ಲದೆ ಎಲ್ಲವನ್ನು ಮರೆತು ತೆರದ ಜೀಪ್​ನಲ್ಲಿ ರ್ಯಾಲಿ ಮಾಡಿ ಶೋ ಕೊಟ್ಟಿದ್ದಾರೆ.

ಹೌದು.. ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ ಇಡೀ ದೇಶವೇ ಶೋಕಾಚರಣೆಯಲ್ಲಿರುವಾಗ ತುಮಕೂರು ಇನ್ಸ್‌ಪೆಕ್ಟರ್ ಆಗಿದ್ದ ದಿನೇಶ್ ಕುಮಾರ್ ಮಾತ್ರ ಎಲ್ಲವನ್ನು ಮರೆತು ಹಾರ ಹಾಕಿಸಿಕೊಂಡು ಮೆರೆದಾಡಿದ್ದಾರೆ. ಸದ್ಯ ಇನ್ಸ್‌ಪೆಕ್ಟರ್ ದಿನೇಶ್ ನಡೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತುಮಕೂರು ಸಿಪಿಐ ಆಗಿದ್ದ ಬಿ.ಎಸ್.ದಿನೇಶ್ ಕುಮಾರ್ ಕಳೆದ ತಿಂಗಳ ಮಾರ್ಚ್ 24ರಂದು ತುಮಕೂರು ನಗರ ಪೊಲೀಸ್ ಠಾಣೆಯಿಂದ ಕುಶಾಲನಗರ ವೃತ್ತ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನೆಲೆ ನಿನ್ನೆ ತುಮಕೂರಿನ ನಾಗರೀಕರ ಹಿತರಕ್ಷಣಾ ಸಮಿತಿ ಹಾಗೂ ಪ್ರಗತಿ ಪರ ಕನ್ನಡ ಪರ ದಲಿತ ಪರ ಹೋರಾಟಗಾರರ ವೇದಿಕೆ ವತಿಯಿಂದ ನಗರದ ಟೌನ್ ಹಾಲ್ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ದಿನೇಶ್ ಗೆ ಬೀಳ್ಕೊಡುಗೆ ಸಮಾರಂಭ ಮಾಡಲಾಗಿದೆ.

ಹಾಗಾಗಿ ಇದೀಗ ಶೋಕಾಚರಣೆ ಬಿಟ್ಟು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಇನ್ಸ್‌ಪೆಕ್ಟರ್ ದಿನೇಶ್‌ ಕುಮಾರ್ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕ್ರೇನ್ ನಲ್ಲಿ ಹಾರ ಹಾಕಿಸಿಕೊಂಡು ಬೀಳ್ಕೊಡುಗೆ ಸಂಭ್ರಮ ಮಾಡಲಾಗಿದ್ದು, ಹಾರದ ಒಳಗೆ ಹುಲಿ ಫೋಟೋ ಹಾಕಿ ಇನ್ಸ್‌ಪೆಕ್ಟರ್ ದಿನೇಶ್ ಕುಮಾರ್ ಶೋ ಕೊಟ್ಟಿದ್ದಾರೆ. ಈ ಎಲ್ಲಾ ಬೆಳವಣಿಗೆ ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮಾಧ್ಯಮ ಹಾಗೂ ಪ್ರೇಕ್ಷಕರು ತೋರಿದ ಒಲವು.. ಅದುವೆ “ಯುದ್ದ ಕಾಂಡ”ದ ಗೆಲುವು – ಅಜಯ್​ ರಾವ್!

Btv Kannada
Author: Btv Kannada

Read More