ಕಾಶ್ಮೀರ : ಕಣಿವೆ ನಾಡಿನ ಪಹಲ್ಗಾಮ್ನಲ್ಲಿ ನಿನ್ನೆ ಭಯಾನಕ ರೀತಿಯಲ್ಲಿ ಉಗ್ರರ ದಾಳಿಯಾಗಿದೆ. ಸಹಜ ಜೀವನ, ಶಾಂತಿ ಸ್ಥಿತಿಗೆ ಮರಳ್ತಿದ್ದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಪರಿಸ್ಥಿತಿಯನ್ನ ಬಿಗಡಾಯಿಸಿದೆ. ಬೇಸಿಗೆ ರಜೆ ಕಳೆಯಲು ಕಾಶ್ಮೀರಕ್ಕೆ ಆಗಮಿಸಿದ್ದ ಪ್ರವಾಸಿಗರನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ 3 ಕನ್ನಡಿಗರು, ಇಬ್ಬರು ವಿದೇಶಿಗರು ಸೇರಿ 28 ಪ್ರವಾಸಿಗರು ಜೀವ ಬಿಟ್ಟಿದ್ದಾರೆ.
ಕೃತ್ಯದ ಹೊಣೆಯನ್ನ ಎಲ್ಇಟಿಯ The Resistance Front ಹೊತ್ತುಕೊಂಡಿದೆ. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಿಂದ ಇಳಿದು ಬಂದ ಉಗ್ರರು, ಪ್ರವಾಸಿಗರ ಸೋಗಿನಲ್ಲಿ ಮಾತನಾಡಿಸುವ ನೆಪದಲ್ಲಿ ದಾಳಿ ಆರಂಭಿಸಿದ್ದಾರೆ. ಇಬ್ಬರು ಸ್ಥಳೀಯರು ಸೇರಿ ಒಟ್ಟು 8 ಉಗ್ರರು ಓಪನ್ ಫೈರ್ ಮಾಡಿದ್ದಾರೆ.
ಕೃತ್ಯಕ್ಕೆ ಎಕೆ-47 ಗನ್ ಬಳಕೆ ಆಗಿದ್ದು, ಸ್ಪೆಷಲಿ ಮುಸ್ಲಿಮೇತರರನ್ನು ಗುರಿಯಾಗಿಸಿ ಹೇಡಿತನ ಮೆರೆದಿದ್ದಾರೆ. ನೀವು ಹಿಂದೂಗಳಾ ಎಂದು ಕೇಳಿ ಕೇಳಿ ಟಾರ್ಗೆಟ್ ಮಾಡಿದ್ದಾರೆ. ಇದೀಗ ಓರ್ವ ಭಯೋತ್ಪಾದಕನ ಸ್ಪೆಷಲ್ ಫೋಟೋ ರಿಲೀಸ್ ಆಗಿದೆ. ಗನ್ ಹಿಡಿದು ಭೀಕರ ಕೃತ್ಯ ನಡೆಸ್ತಿರುವ ಫೋಟೋ ಇದಾಗಿದೆ.
ಇದನ್ನೂ ಓದಿ : ಪಹಲ್ಗಾಮ್ನಲ್ಲಿ ಹಿಂದೂಗಳ ನರಮೇಧ – ಸಿಎಂ ಸೂಚನೆ ಬೆನ್ನಲ್ಲೇ ಕನ್ನಡಿಗರ ರಕ್ಷಣೆಗೆ ಕಾಶ್ಮೀರ ತಲುಪಿದ ಸಚಿವ ಸಂತೋಷ್ ಲಾಡ್!
