BTV ಹೇಳಿದ್ದೇ ನಿಜ.. ರಿಕ್ಕಿ ರೈ ಫೈರಿಂಗ್ ಕೇಸ್ ಬರೀ ಫೇಕ್​ – ಗಾಂಜಾ ಮತ್ತಿನಲ್ಲಿ ಪ್ಲ್ಯಾನ್​​.. ಪೊಲೀಸರ ತನಿಖೆಯಲ್ಲಿ ಶೂಟೌಟ್​ ನಾಟಕ ರಿವೀಲ್!

ಕೊನೆಗೂ BTV ಹೇಳಿದ್ದೇ ನಿಜವಾಗಿದೆ. ಮಾಜಿ ಡಾನ್​​ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಫೈರಿಂಗ್ ಕೇಸ್ ಬರೀ ಫೇಕ್​ ಅನ್ನೋದು ಗೊತ್ತಾಗಿದೆ. ಮಾಜಿ ಡಾನ್​​ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಶೂಟೌಟ್ ಪ್ರಕರಣವೇ ಸಂಪೂರ್ಣ ನಕಲಿ​ ಅನ್ನೋದು ಸಾಬೀತಾಗಿದೆ. ಪೊಲೀಸರ ಇನ್ವೆಸ್ಟಿಗೇಷನ್​​ನಲ್ಲಿ ರಿಕ್ಕಿ ರೈ ಮಾಡಿದ್ದ ಫೈರಿಂಗ್ ನಾಟಕ ರಿವೀಲ್ ಆಗಿದೆ. ರಾತ್ರಿ ಗುಂಡಿನ ಸದ್ದು ಮೊಳಗಿದ್ದಲ್ಲ ಬದಲಾಗಿ ಮೊಳಗಿಸಿದ್ದು ಎಂಬ ಪಕ್ಕಾ ಪ್ಲ್ಯಾನ್ ಬಯಲಾಗಿದೆ. BTV ವಾಹಿನಿ ರಿಕ್ಕಿ ರೈ ನಿರ್ದೇಶನ ಮಾಡಿದ್ದ ಪಕ್ಕಾ ನಕಲಿ ಶೂಟೌಟ್​ ಕೇಸ್​ ಬಗ್ಗೆ ಇಂಚಿಂಚೂ ಮಾಹಿತಿ ರಿವೀಲ್ ಮಾಡಿದೆ.

ಗುಂಡಿನ ನಶೆಯ ನಡುವೆ ಬೋರ್ಗನ್ನಿನ ಸದ್ದು ರಿಕ್ಕಿ ರೈಯದ್ದೇಯಂತೆ. ಬೆಂಗಳೂರಿನ ಸದಾಶಿವನಗರ ಮನೆಯಲ್ಲಿ ಗುಂಡು ತುಂಡಿನ ಪಾರ್ಟಿ ಮಾಡಿದ್ದ ರಿಕ್ಕಿ ರೈ ನಂತರ ತಡರಾತ್ರಿ ಕಾರಿನಲ್ಲೇ ನಶೆಯ ಕಾರ್ ಡ್ರೈವಿಂಗ್ ಮಾಡಿದ್ದಾರೆ. ಡ್ರೈವರ್ ಬಸವರಾಜ್​​, ಬಾಡಿಗಾರ್ಡ್ ರಾಮ್ ಪಾಲ್ ಜೊತೆ ಬಿಡದಿ ಮನೆಗೆ ನಶೆಯಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಬಿಡದಿ ಮನೆಯಲ್ಲಿ ರಿಕ್ಕಿ ರೈ ಅಮಲಲ್ಲೇ ಕೂತಿದ್ದು ನಶೆಯ ತಲೆಯಲ್ಲಿ ಶತ್ರುಗಳ ವಿರುದ್ಧ ದಾಳ ಎಸೆದಿದ್ದಾನೆ.

ತನ್ನ ಬಾಡಿಗಾರ್ಡ್ಸ್ ಗಳಾದ ವಿಠ್ಠಲ ಹಾಗೂ ರಾಮ್ ಪಾಲ್​ನನ್ನು ಕರೆದಿದ್ದ ರಿಕ್ಕಿ ರೈ ಜೊತೆ ಡ್ರೈವರ್ ಬಸವರಾಜ ಕೂಡ ಕಿವಿಕೊಟ್ಟು ಎಲ್ಲಾ ಕೇಳ್ತಿದ್ದ. ತಾನೇ ಬೋರ್ಗನ್ ಹಿಡಿದು ಸೈಲೆಂಟಾಗಿ ಟ್ರಿಗರ್ ಒತ್ತುತ್ತಿನಿ. ಕಾರಿನ ಡೋರು ಚೂರು ಚೂರಾಗುವಷ್ಟು ಹತ್ತಿರದಲ್ಲೇ ನಿಂತು ಫೈರಿಂಗ್​​ ಮಾಡ್ತೀನಿ. ಫೈಯರ್ ಮಾಡೋ ಹೊತ್ತಿಗೆ ವಿಠ್ಠಲ ಸುತ್ತಲಿರೋ ಸಿಸಿ ಟಿವಿಯನ್ನು ಆಫ್ ಮಾಡ್ಬೇಕು. ನಂತರ ರಾಮ್ ಪಾಲ್ ತನ್ನ ಜೊತೆ ಇದ್ದಹಾಗೇ ಇರ್ಬೇಕು. ಕಾರು ಮನೆಯಿಂದ ಹೊರಟು ಗೇಟಿನ ಸಮೀಪವಿರಬೇಕು. ಫೈರಿಂಗ್ ಆಗ್ತಿದ್ದಂತೆ ಡ್ರೈವರ್ ಬಸವರಾಜ ಪೊಲೀಸರನ್ನು ಕರೆದು ದೂರನ್ನು ಕೊಡ್ಬೇಕು ಎಂದು ರಿಕ್ಕಿ ರೈ ಶತ್ರುಗಳ ವಿರುದ್ಧ ಖತರ್ನಾಕ್ ಐಡಿಯಾ ಮಾಡಿದ್ದಾನೆ.

ರಿಕ್ಕಿ ರೈ ಇಷ್ಟು ಪ್ರಿಪ್ಲ್ಯಾನ್ ಮಾಡಿ ಅದೇ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾನೆ. ಇದಕ್ಕೂ ಮೊದಲು ಬಸವರಾಜನನ್ನು ಕರೆದು ಘಟನೆ ಬಳಿಕ ರಾಕೇಶ್ ಮಲ್ಲಿ ಹಾಗೂ ಅನುರಾಧ ರೈ ಸೇರಿದಂತೆ ನಾಲ್ವರ ವಿರುದ್ಧ FIR ದಾಖಲಿಸುವಂತೆ ಸೂಚಿಸಿದ್ದಾನೆ. ರಿಕ್ಕಿ ರೈ ಎಲ್ಲಾ ಪ್ಲ್ಯಾನ್ ಮಾಡಿದ್ದು ಫೈರಿಂಗ್ ವೇಳೆ ಸೇಫ್ಟಿ ನೋಡಿಕೊಳ್ಳದೇ ಇದ್ದಿದ್ರಿಂದ ಗುಂಡಿನ ತುಂಡಾದ ಭಾಗ ಮೂಗಿಗೆ ಹಾಗೂ ಕೈಗೆ ಬಡಿದಿದೆ. ಉಳಿದಂತೆ ರಿಕ್ಕಿ ರೈ ಪ್ರಿ ಪ್ಲ್ಯಾನ್​ನಂತೆ ಕೇಸೂ ಕೂಡ ದಾಖಲಾಯ್ತು. ಇದೀಗ ಬಾಡಿಗಾರ್ಡ್ ವಿಕ್ಕಿ ಹಾಗೂ ಬಸವರಾಜನನ್ನು ಅರೆಸ್ಟ್ ಮಾಡಿದ್ದ ಪೊಲೀಸರು ವರ್ಕೌಟ್ ಮಾಡ್ತಿದ್ದಂತೆ ಸತ್ಯ ಬಾಯ್ಬಿಟ್ಟಿದ್ದಾರೆ. ಇಬ್ಬರು ನೀಡಿರೋ ಹೇಳಿಕೆಯಿಂದ ಪ್ರಕರಣ ಇದೀಗ ರಿಕ್ಕಿ ರೈ ಲಾಕ್​ ಆಗಿದ್ದು ಈತನ ಕಡೇನೇ ಕೇಸ್​ ತಿರುಗಿದೆ.

ವಿರೋಧಿಗಳನ್ನು ಮಣಿಸಲು ನಾಟಕದ ಕಥೆ ಕಟ್ಟಿ ಎಲ್ಲರನ್ನೂ ವಂಚಿಸಿರುವ ರಿಕ್ಕಿ ರೈ ಅಂಡ್ ಗ್ಯಾಂಗ್​ ಅನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಅರೆಸ್ಟ್ ಮಾಡಲಿದ್ದಾರೆ. ಸದ್ಯ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಕ್ಕಿ ರೈ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಗೋಲ್ಡ್ ಸ್ಮಗ್ಲಿಂಗ್ ರಾಣಿ ನಟಿ ರನ್ಯಾ ರಾವ್​​ಗೆ ಜೈಲೇ ಗತಿ – ಜಾಮೀನು ತೀರ್ಪು ಆದೇಶ ಕಾಯ್ದಿರಿಸಿದ ಹೈಕೋರ್ಟ್!

Btv Kannada
Author: Btv Kannada

Read More

Read More