ಹೈಕೋರ್ಟ್ ನ್ಯಾಯಮೂರ್ತಿಗಳ ಏಕಾಏಕಿ ವರ್ಗಾವಣೆ – ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರ ಬೃಹತ್ ಪ್ರೊಟೆಸ್ಟ್!

ಬೆಂಗಳೂರು : ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ಏಕಾಏಕಿ ವರ್ಗಾವಣೆಯನ್ನು ವಿರೋಧಿಸಿ ​ಇಂದು ಹಿರಿಯ ವಕೀಲರು ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಿದ್ರು.

ಹೈಕೋರ್ಟ್ (ಉಚ್ಚ ನ್ಯಾಯಾಲಯ)ದ ಗೋಲ್ಡನ್ ಗೇಟ್ ಮುಂದೆ ಸಾವಿರಾರು ವಕೀಲರು ಜಮಾಯಿಸಿ ನ್ಯಾಯಮೂರ್ತಿಗಳ ಏಕಾಏಕಿ ಟ್ರಾನ್ಸ್​ಫರ್​ ಖಂಡಿಸಿ ಬೃಹತ್ ಪ್ರೊಟೆಸ್ಟ್ ನಡೆಸಿದ್ರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲಾ ಹಿರಿಯ ವಕೀಲರು ಹಾಗೂ ಬೆಂಗಳೂರು ವಕೀಲರ ಸಂಘದ ಸದಸ್ಯರುಗಳು ಸುಪ್ರೀಂಕೋರ್ಟ್ ಮಾಡಿರುವ ತನ್ನ ವರ್ಗಾವಣೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರವೀಣ್ ಗೌಡ, ಉಪಾಧ್ಯಕ್ಷರಾದ ಶ್ರೀ ಗಿರೀಶ್ ಕುಮಾರ್, ಖಜಾಂಚಿಗಳಾದ ಶ್ರೀಮತಿ ಶ್ವೇತಾ ರವಿಶಂಕರ್, ಮಾಜಿ ಅಡ್ವೊಕೇಟ್ ಜನರಲ್​ಗಳಾದ ಬಿ.ವಿ ಆಚಾರ್ಯ, ಉದಯ್ ಹೊಳ್ಳ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗುಂದ್, ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ವಕೀಲರು, ಬೆಂಗಳೂರು ವಕೀಲರ ಸಂಘದ ಸದಸ್ಯರು ಹಾಗೂ ವಕೀಲ ಮಿತ್ರರು ಸೇರಿ ಹಲವರು ಉಪಸ್ಥಿತರಿದ್ದರು.

ವಕೀಲರ ಬೃಹತ್​ ಪ್ರತಿಭಟನೆ ಮಾಹಿತಿಯನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ ಅವರು ಫೇಸ್​ಬುಕ್​ ಸೇರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಹೈಕೋರ್ಟ್ ನ್ಯಾಯಮೂರ್ತಿಗಳ ಏಕಾಏಕಿ ವರ್ಗಾವಣೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿವೇಕ್ ಸುಬ್ಬಾರೆಡ್ಡಿ ಅವರ ಆಗ್ರಹಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ : ‘ಮಂಕುತಿಮ್ಮನ ಕಗ್ಗ’ ಟ್ರೇಲರ್ ಬಿಡುಗಡೆ – ಮೇ ತಿಂಗಳಲ್ಲಿ ಸಾಹಿತಿ ಡಿವಿಜಿ ಬಾಲ್ಯ ಕಥನಾ ಸಿನಿಮಾ ರೂಪದಲ್ಲಿ ತೆರೆಗೆ!

Btv Kannada
Author: Btv Kannada

Read More