ಕಾರವಾರ : ನಿವೃತ್ತ ಡಿಜಿಪಿ ಓಂಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಓಂಪ್ರಕಾಶ್ ಅವರ ಪತ್ನಿ ಪಲ್ಲವಿ A1, ಮಗಳು ಕೃತಿ A2 ಆಗಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ ಹತ್ಯೆ ಪ್ರಕರಣ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇದೀಗ ಓಂಪ್ರಕಾಶ್ ಹತ್ಯೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅವರ ಆಸ್ತಿಯೂ ಕಾರಣವಾಯಿತಾ ಅನ್ನೋ ಅನುಮಾನ ಕೂಡ ಹುಟ್ಟಿಕೊಂಡಿದೆ.
ನಿವೃತ್ತ ಡಿಜಿಪಿ ಓಂಪ್ರಕಾಶ್ 1993ರಲ್ಲಿ ಉತ್ತರ ಕನ್ನಡ ಜಿಲ್ಲೆಯ SPಯಾಗಿದ್ದರು. ಆಗ ಜೋಯಿಡಾ ತಾಲೂಕಿನ ಪರಿಸರಕ್ಕೆ ಮನಸೋತು ಓಂಪ್ರಕಾಶ್ ಅವರು 2011-12ರಲ್ಲಿ ಸಾಮ ಜೋಯಿಡಾದಲ್ಲಿ 2.17 ಎಕರೆ ಜಮೀನು ಹಾಗೂ ದಾಂಡೇಲಿಯ ಗಣೇಶನಗುಡಿಯ ಬಾಡಗುಂದದಲ್ಲಿ 5 ಎಕರೆ ಜಮೀನು ಖರೀದಿ ಮಾಡಿದ್ದರು. ಈ ಎರಡು ಜಾಗವನ್ನು ಪುತ್ರ ಕಾರ್ತಿಕೇಶ್ ಹೆಸರಿನಲ್ಲಿ ಖರೀದಿ ಮಾಡಿದ್ದರು. ಆ ಜಾಗದಲ್ಲಿ ಓಂ ಪ್ರಕಾಶ್ ಅವರು ಗೆಸ್ಟ್ ಹೌಸ್ ನಿರ್ಮಿಸಿದ್ದರು. ಬಿಡುವಿನ ಸಮಯದಲ್ಲಿ ಗೆಸ್ಟ್ ಹೌಸ್ ಗೆಸ್ಟ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಇದನ್ನೂ ಓದಿ : ಓಂ ಪ್ರಕಾಶ್ ಕೊಲೆಗೆ ಪತ್ನಿ, ಮಗಳ ಖತರ್ನಾಕ್ ಸ್ಕೆಚ್ – ಖಾರದಪುಡಿ, ಅಡುಗೆ ಎಣ್ಣೆ, ಬಂದೂಕು ರಹಸ್ಯ ರಿವೀಲ್!
