ಕಾರವಾರ : ವಾಯು ವಿಹಾರಕ್ಕೆ ಹೋಗುತ್ತಿದ್ದ ಮಾಜಿ ನಗರಸಭಾ ಸದಸ್ಯನನ್ನು ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕಾರವಾರ ನಗರದ ಕಮಲಾಕರ್ ರಸ್ತೆಯ BSNL ಕಚೇರಿ ಬಳಿ ನಡೆದಿದೆ.
ಮಾಜಿ ನಗರಸಭಾ ಸದಸ್ಯನಾಗಿರುವ ಸತೀಶ್ ಕೋಳಂಕರ್ಗೆ ಹಂತಕರು ಚಾಕು ಇರಿದಿದ್ದು, ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸತೀಶ್ ಕೋಳಂಕರ್ ಸಾವನ್ನಪ್ಪಿದ್ದಾರೆ.
ವೈಯಕ್ತಿಕ ದ್ವೇಷಕ್ಕೆ ಸತೀಶ್ ಕೋಳಂಕರ್ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಡಿಸಿಎಂ ಡಿಕೆಶಿ ಭೇಟಿ ಮಾಡಿದ ಮಾಜಿ ಶಾಸಕರಾದ ಡಿಸಿ ಗೌರಿಶಂಕರ್, ಆರ್ ಮಂಜುನಾಥ್ – ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ!

Author: Btv Kannada
Post Views: 162