ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದ ಫೈರಿಂಗ್ ಕಳ್ಳಾಟನಾ ಅನ್ನೋ ಅನುಮಾನಗಳು ಶುರುವಾಗಿವೆ. BTV ವಾಹಿನಿ ಫೇಕ್ ಫೈರಿಂಗ್ ಅನುಮಾನದ EXCLUSIVE ಮಾಹಿತಿ ಬಿಚ್ಚಿಡ್ತಿದೆ. ತನ್ನ ಶತ್ರುಗಳ ಮೇಲೆ ಕೇಸ್ ಫಿಟ್ ಮಾಡೋಕ್ಕೆ ಫೈರಿಂಗ್ ಹೈಡ್ರಾಮಾ ನಡೀತಾ ಎಂಬ ಚರ್ಚೆಗಳೂ ಚಾಲ್ತಿಗೆ ಬಂದಿವೆ.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ 12mm ಬೋರ್ಗನ್ ಮೂಲಕ ಫೈರಿಂಗ್ ನಡೆದಿರೋದು ನಿಜ. ಆದ್ರೆ ಬೋರ್ಗನ್ ರಿಕ್ಕಿ ಗನ್ ಮ್ಯಾನ್ ರಾಮ್ ಪಾಲ್ನದ್ದಾ ಎಂಬ ಅನುಮಾನ ಇದೆ. ಈಗಾಗ್ಲೇ ಪೊಲೀಸರು ಗನ್ ಮ್ಯಾನ್ನ ಎರಡೂ ಗನ್ಗಳನ್ನು ವಶಕ್ಕೆ ಪಡೆದಿದ್ದಾರೆ. ಫೈರಿಂಗ್ ಬಗ್ಗೆ ಬಿಡದಿ ಠಾಣೆಗೆ ಕಂಪ್ಲೇಂಟ್ ಕೊಟ್ಟಿರುವ ದೂರುದಾರ ಕಾರು ಡ್ರೈವರ್ ಬಸವರಾಜನ ಮೇಲೆಯೇ ಪೊಲೀಸರು ಅನುಮಾನಗೊಂಡಿದ್ದು ಲಾಠಿ ರುಚಿ ಸಿಕ್ತಿದ್ದಂತೆ ಸತ್ಯಾಂಶ ಬಾಯ್ಬಿಟ್ನಾ ಎಂಬಂತಾಗಿದೆ.
ಫೈರಿಂಗ್ ನಡೆದಾಗ ಡ್ರೈವರ್ ಸೀಟ್ ಹೊಕ್ಕಿದ್ದ ಗುಂಡು ಅದೇ ಸೀಟ್ನಲ್ಲಿದ್ದ ಚಾಲಕ ಬಸವರಾಜ್ಗೆ ಯಾಕೆ ಗುಂಡು ತಾಕಿಲ್ಲ ಜೊತೆಗೆ ಗಾಯನೂ ಮಾಡಿಲ್ಲ. ಒಂದೇ ಒಂದು ಸಣ್ಣ ಗಾಯವೂ ಇಲ್ಲದೆ ಬಸವರಾಜ್ ಫೈರಿಂಗ್ನಿಂದ ಬಚಾವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗಳು ಎದ್ದಿದ್ದು ಒಟ್ಟಾರೆ ಡ್ರೈವರ್, ಗನ್ ಮ್ಯಾನ್ ನೀಡಿರೋ ಹೇಳಿಕೆಗಳು ಕೂಡ ವ್ಯತ್ಯಾಸಗಳಿಂದ ಕೂಡಿವೆ.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮಲತಾಯಿ ಅನುರಾಧ ರೈ ಹಾಗೂ ರಾಕೇಶ್ ಮಲ್ಲಿ ಮೇಲೆ ಕೇಸು ಜಡಿಯೋಕೆ ಇಷ್ಟೆಲ್ಲಾ ಡ್ರಾಮಾ ಮಾಡಿದ್ದಾರಾ ಎಂಬ ಚರ್ಚೆ ಇದ್ದು ರಿಕ್ಕಿ ರೈ ಬಳಿ ಲೈಸೆನ್ಸ್ ಇರೋ ಗನ್ಗಳೆಷ್ಟು.. ಲೈಸೆನ್ಸ್ ಇಲ್ಲದೇ ಇರೋ ಗನ್ಗಳೆಷ್ಟು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ರಿಕ್ಕಿ ರೈ ಸಣ್ಣದಾಗಿ ಫೈರಿಂಗ್ ಮಾಡಿ ದೊಡ್ಡದಾಗಿ ಸುದ್ದಿ ಮಾಡಿದ್ರಾ. ರಿಕ್ಕಿ ಕಾರಿನ ಹಿಂದೆ ಕೂತು ತಾನೇ ಕಾರಿನ ಡ್ರೈವರ್ ಸೀಟಿನತ್ತ ಫೈಯರ್ ಮಾಡಿದ್ನಾ. ಗುಂಡಿನ ಚೂರು ರಿಕ್ಕಿ ಪಕ್ಕದಲ್ಲೇ ಇದ್ದಿದ್ರಿಂದ ಮೂಗಿಗೆ ಬಡೀತಾ ಎಂಬ ಹಲವು ಪ್ರಶ್ನೆಗಳಿದ್ದು ರಿಕ್ಕಿ ರೈ, ಡ್ರೈವರ್ ಬಸವರಾಜ್, ರಾಮ್ಪಾಲ್ ಮೇಲೆಯೇ ಭಾರೀ ಅನುಮಾನ ವ್ಯಕ್ತವಾಗುತ್ತಿದೆ.
ಪೊಲೀಸ್ ಅಧಿಕಾರಿಗಳು ಈ ಮೂವರ ಸುತ್ತಮುತ್ತವೇ ಇನ್ವೆಸ್ಟಿಗೇಷನ್ ಕಾನ್ಸಂಟ್ರೇಟ್ ಮಾಡಿದ್ದು ಇಂದು ಸಂಜೆ ಒಳಗೆ ಫೈರಿಂಗ್ ಅಸಲಿ ರಹಸ್ಯ ಏನು ಅನ್ನೋದು ಹೊರ ಬೀಳೋದಂತೂ ಸತ್ಯ. ಯಾವ ಕಾರಣಕ್ಕಾಗಿ ಇಷ್ಟೆಲ್ಲಾ ಡ್ರಾಮಾ ಮಾಡ್ತಿದ್ದಾರೆ ಅಥವಾ ಫೈರಿಂಗ್ ನಿಜಾನಾ ಎಲ್ಲದರ ಬಗ್ಗೆಯೂ ಸತ್ಯಾಂಶ ಹೊರ ಬರಲಿದೆ.
