ಮಹೇಶ್ ಶೆಟ್ಟಿ ತಿಮರೋಡಿ ಸವಾಲಿಗೆ ಪುನೀತ್ ಕೆರೆಹಳ್ಳಿ ಕೌಂಟರ್ – ಉಜಿರೆಯಲ್ಲಿ ‘ಹಿಂದುತ್ವ’ ಶಕ್ತಿ ಪ್ರದರ್ಶನ.. ಪೊಲೀಸರ ಎಂಟ್ರಿಯಿಂದ ವಾಪಸ್!

ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ ಹಿಂದುತ್ವವಾದಿಗಳ ಬೃಹತ್ ಶಕ್ತಿ ಪ್ರದರ್ಶನ ನಡೆದಿದೆ. ಮಹೇಶ್ ಶೆಟ್ಟಿ ತಿಮರೋಡಿಗೆ ಹಿಂದೂ ಕಾರ್ಯಕರ್ತರು ಸವಾಲೆಸೆದಿದ್ದಾರೆ. ತಾಕತ್ತಿದ್ರೆ ಉಜಿರೆಗೆ ಬಾ ಅಂತ ಮಹೇಶ್ ಶೆಟ್ಟಿ ತಿಮರೋಡಿ ಎಸೆದಿದ್ದ ಚಾಲೆಂಜ್ ಸ್ವೀಕರಿಸಿ ಪುನೀತ್ ಕೆರೆಹಳ್ಳಿ ಉಜಿರೆಗೆ ಆಗಮಿಸಿದ್ರು. ಆದ್ರೆ ಉಜಿರೆಗೆ ಬಂದ ಪುನೀತ್ ಕೆರೆಹಳ್ಳಿಗೆ ಪೊಲೀಸರು ತಡೆಯೊಡ್ಡಿದ್ದಾರೆ.

ಉಜಿರೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿ ಆಗಮಿಸುವುದನ್ನು ಪೊಲೀಸರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶದ ಮೇರೆಗೆ ಪ್ರವೇಶ ನಿಷೇಧ ಹೇರಲಾಗಿತ್ತು. ಮಾತಿನ ಚಕಮಕಿ ನಡೆದ ಬಳಿಕ ಪೊಲೀಸರು ಪುನೀತ್ ಮತ್ತು ಬೆಂಬಲಿಗರನ್ನು ವಾಪಸ್ ಕಳುಹಿಸಿದ್ದಾರೆ. ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ನಿನ್ನೆ ಸಂಜೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಭಾಷಣ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ವೀಕ್ಷಿಸಲು ಪುನೀತ್ ಕೆರೆಹಳ್ಳಿ ಬರುತ್ತಿದ್ದಾಗ, ಅವರನ್ನು ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡಹಾಕಿ ಹಿಂದಕ್ಕೆ ಕಳುಹಿಸಿದ್ದಾರೆ.

ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಹಾಗೂ ಪುನೀತ್ ಕೆರಹಳ್ಳಿ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಸಮರ ನಡೆದಿತ್ತು. ಪುನೀತ್ ಕೆರಹಳ್ಳಿ ಉಜಿರೆಗೆ ಬಂದರೆ ಗಲಭೆಯಾಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಬೆಳ್ತಂಗಡಿ ಪೊಲೀಸರು ಪುನೀತ್ ಕೆರೆಹಳ್ಳಿ ಉಜಿರೆಗೆ ಪ್ರವೇಶ ನಿಷೇಧಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ನಿನ್ನೆ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ ಪುನೀತ್ ಕೆರಹಳ್ಳಿ ಅವರನ್ನು ಪೊಲೀಸರು ತಡೆದಿದ್ದು, ಈ ವೇಳೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಪುನೀತ್ ಹಾಗೂ ತಂಡವನ್ನು ಹಿಂದಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕ ಎಸ್. ವಿಜಯ ಪ್ರಸಾದ್ ಮತ್ತು ತಂಡ ಉಜಿರೆಯ ಕಾಲೇಜ್ ರಸ್ತೆಯಲ್ಲಿ ಅಡ್ಡ ಹಾಕಿ, ದ.ಕ. ಪ್ರವೇಶ ನಿಷೇಧ ಮಾಡಿದ ಜಿಲ್ಲಾಧಿಕಾರಿ ಆದೇಶ ತೋರಿಸಿ ತಡೆದು ವಾಪಸ್‌ ಹೋಗುವಂತೆ ಮನವಿ ಮಾಡಿದರು. ಈ ಸಂದರ್ಭ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ ಕಾರಣ ಮಾತಿನ ಚಕಮಕಿ ನಡೆಯಿತು. ಇದಕ್ಕೂ ಮೊದಲು ಪುನೀತ್ ಅವರು ಕಾರಿನ ಮೇಲೆ ನಿಂತು ತಾಕತ್ತಿದ್ದರೆ ತನ್ನನ್ನು ತಡೆಯುವಂತೆ ಸವಾಲು ಹಾಕಿದ್ದರು.

ಉಜಿರೆ ಪೇಟೆಯಲ್ಲಿ ಕೆಲ ಕಾಲ ಪ್ರಕ್ಷುಬ್ದ ವಾತಾವತರಣ ಕಂಡು ಬಂತು. ಪೊಲೀಸರ ಭದ್ರತೆಯಿಂದ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಕೆಲ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ವಿರಾಟ್ ರಾಮೋತ್ಸವದಲ್ಲಿ ಚಕ್ರವರ್ತಿ ಸೂಲಿಬೆಲೆ ಬೆಂಕಿ ಭಾಷಣ ಮಾಡಿದ್ರು. ಹಿಂದೂಗಳು ಎಲ್ಲಾ ಒಗ್ಗಟ್ಟಾಗಿರುವಂತೆ ಕರೆ ನೀಡಿದ್ರು.

ಇದನ್ನೂ ಓದಿ : ಕೊನೆಗೂ ಬ್ರಾಹ್ಮಣರಲ್ಲಿ ಕಿಚ್ಚು ಹಚ್ಚಿದ್ದ ‘ಜನಿವಾರ್‌’ಗೆ 4 ತಲೆದಂಡ – ಕಾಲೇಜಿನ ಪ್ರಾಚಾರ್ಯ, ಗುಮಾಸ್ತ ವಜಾ.. ಇಬ್ಬರು ಹೋಂ ಗಾರ್ಡ್‌ ಸಸ್ಪೆಂಡ್!

Btv Kannada
Author: Btv Kannada

Read More