ಬೆಂಗಳೂರು : ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ನಿನ್ನೆ ರಾತ್ರಿ ಫೈರಿಂಗ್ ನಡೆದಿದೆ. ರಾಮನಗರ ತಾಲೂಕಿನ ಬಿಡದಿಯ ಮುತ್ತಪ್ಪ ರೈ ಮನೆ ಬಳಿ ಫೈರಿಂಗ್ ನಡೆದಿದ್ದು, ರಿಕ್ಕಿ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ರಿಕ್ಕಿ ರೈಗೆ ಗುಂಡೇಟಿನಿಂದ ಮೂಗಿಗೆ ಗಾಯವಾಗಿದ್ದು, ಸದ್ಯ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಸರ್ಜರಿಗೆ ಅನಸ್ತೇಷಿಯಾ ನೀಡಿರುವುದರಿಂದ ರಿಕ್ಕಿಯನ್ನ ತೀವ್ರ ನಿಗಾ ಘಟಕದಲ್ಲಿಡಲಾಗಿದೆ. ಅನಸ್ತೇಷಿಯಾದ ಗಂಭೀರತೆ ಕಡಿಮೆಯಾದ ಬಳಿಕ ವಾರ್ಡ್ಗೆ ಶಿಪ್ಟ್ ಮಾಡಲಾಗುತ್ತೆ. ರಿಕ್ಕಿ ರೈಯನ್ನು ಆಸ್ಪತ್ರೆ ಸಿಬ್ಬಂದಿ ನಾಳೆ ಬೆಳಿಗ್ಗೆ ವಾರ್ಡ್ಗೆ ಶಿಫ್ಟ್ ಮಾಡಲಿದ್ದಾರೆ.
ರಿಕ್ಕಿ ಮೇಲೆ ನಡೆದ ಫೈರಿಂಗ್ಗೆ ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜು ಅವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗುಂಡಿನ ದಾಳಿಯಲ್ಲಿ ನಾಲ್ವರ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಶೆಟ್ಟಿ, ವೈದ್ಯನಾಥನ್ ಮತ್ತು ಸಹಚರರ ಮೇಲೆ BNS 109.3(5), Arms Act 1959ರ ಅಡಿ FIR ದಾಖಲಾಗಿದೆ.
ಇದನ್ನೂ ಓದಿ : ಮೈಸೂರು ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ನಿಂದ ಮಹಿಳೆಗೆ 1.40 ಕೋಟಿ ವಂಚನೆ – ಬ್ಯಾಂಕ್ ಅಧ್ಯಕ್ಷ ಸೇರಿ ಮೂವರ ವಿರುದ್ದ FIR!
