ಜನಿವಾರ ತೆಗೆಸಿದವರನ್ನು ಒದ್ದು ಒಳಗೆ ಕಳಿಸಿ – ಪ್ರಮೋದ್ ಮುತಾಲಿಕ್ ಕಿಡಿ!

ಬೆಂಗಳೂರು : ಹುಬ್ಬಳ್ಳಿ ಹಾಗೂ ಶಿವಮೊಗ್ಗದಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರವನ್ನು ತೆಗೆಸಿದ ಪ್ರಕರಣ ಕರ್ನಾಟಕದಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಬ್ರಾಹ್ಮಣರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಈ ವಿಚಾರವಾಗಿ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಪ್ರತಿಕ್ರಿಯೆ ನೀಡಿದ್ದು, ಜನಿವಾರ ತೆಗೆಸಿದವರನ್ನು ಒದ್ದು ಒಳಗೆ ಕಳಿಸಿ. ಜನಿವಾರ, ಉಡುದಾರ ಎಲ್ಲವೂ ಧಾರ್ಮಿಕ ಸಂಕೇತವಾಗಿದೆ. ಘಟನೆಗೆ ಕಾಂಗ್ರೆಸ್​ನ ನಾಸ್ತಿಕವಾದವೇ ಮೂಲ ಕಾರಣ. ಕೃತ್ಯ ಎಸಗಿದವರನ್ನು ಕೂಡಲೇ ಒದ್ದು ಮನೆಗೆ ಕಳಿಸಿ ಎಂದ ಮುತಾಲಿಕ್ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ದೆಹಲಿಯಲ್ಲಿ ಬೆಳ್ಳಂಬೆಳಗ್ಗೆ 4 ಅಂತಸ್ತಿನ ಕಟ್ಟಡ ಕುಸಿತ – ನಾಲ್ವರು ಸಾವು.. ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ!

Btv Kannada
Author: Btv Kannada

Read More

Read More