ರಾಜ್ಯದಲ್ಲಿ ಬ್ರಾಹ್ಮಣರನ್ನು ಡೈರೆಕ್ಟ್ ಟಾರ್ಗೆಟ್ ಮಾಡಲಾಗ್ತಿದ್ಯಾ.. ಇದೇನು ಪಾಕಿಸ್ತಾನನಾ.. ಬಾಂಗ್ಲಾದೇಶನಾ.. ಇರಾಕಾ.. ಗಾಜಾ ಪಟ್ಟಿನಾ ಎಂಬ ಆಕ್ರೋಶ ವ್ಯಕ್ತವಾಗಿದೆ. ತುಘಲಕ್ ದರ್ಬಾರ್ನಲ್ಲಿ ಬ್ರಾಹ್ಮಣರ ಜನಿವಾರಕ್ಕೆ ಕತ್ತರಿ ಹಾಕಲಾಗಿದ್ದು ಜನಿವಾರ ಅನ್ನೋದು ಬ್ರಾಹ್ಮಣ್ಯತ್ವದ ಸಂಕೇತ, ಇದಕ್ಕೇ ಕತ್ತರಿ ಹಾಕಲಾಗಿದೆ. ಜನಿವಾರ ಹಾಕ್ಕೊಂಡು ಎಕ್ಸಾಂ ಬರೆಯೋದು ತಪ್ಪಾ.. ಕರ್ನಾಟಕದಲ್ಲಿ CET ಪರೀಕ್ಷೆ ವೇಳೆ ಎರಡೆರಡು ಬಾರಿ ಅವಾಂತರಗಳಾಗಿವೆ.
ಪಿಯುಸಿ ಪರೀಕ್ಷೆ ಬೆನ್ನಲ್ಲೇ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ಏಪ್ರಿಲ್ 15, 16, 17 ಸಿಇಟಿ ಪರೀಕ್ಷೆ ನಡೆದಿದೆ. ಕೊನೆಯ ದಿನವಾದ ನಿನ್ನೆ, ಶಿವಮೊಗ್ಗ ಮತ್ತು ಬೀದರ್ನಲ್ಲಿ ಪರೀಕ್ಷಾರ್ಥಿಗೆ ತಪಾಸಣೆ ವೇಳೆ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿರೋದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಬೀದರ್ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲು ಒಪ್ಪದೇ ಗಣಿತ ಪರೀಕ್ಷೆಯಿಂದ ಹೊರಗುಳಿದಿದ್ದಾನೆ. ಇದರಿಂದ ಆತನ ಎಂಜಿನಿಯರಿಂಗ್ ಭವಿಷ್ಯವೇ ಅತಂತ್ರಗೊಂಡಿದೆ. ಆ ಮೂಲಕ ರಾಜ್ಯದಲ್ಲಿ ಬ್ರಾಹ್ಮಣರನ್ನು ಡೈರೆಕ್ಟ್ ಟಾರ್ಗೆಟ್ ಮಾಡಲಾಗ್ತಿದ್ಯಾ ಎಂಬ ಚರ್ಚೆಗಳು ಶುರುವಾಗಿದೆ.
ಬೀದರ್ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿ ಕಳೆದ ಬುಧವಾರ ಜನಿವಾರ ಧರಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ. ಗುರುವಾರ ಗಣಿತ ಪರೀಕ್ಷೆಗೆ ಬಂದಾಗ ಜನಿವಾರ ನೋಡಿದ ಪರೀಕ್ಷಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಾನು ಜನಿವಾರ ತೆಗೆಯಲ್ಲ, ಹಾಗೇ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಬೇಡಿಕೊಂಡಿದ್ದಾನೆ. ಕೊನೆಗೆ ಪರೀಕ್ಷೆಯಿಂದಲೇ ಆತ ದೂರ ಉಳಿದಿದ್ದಾನೆ.
ಶಿವಮೊಗ್ಗದ BGS ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಯೊಬ್ಬ ಜನಿವಾರ ತೆಗೆಯಲ್ಲ ಎಂದಿದ್ದಕ್ಕೆ ಪರೀಕ್ಷಾ ಸಿಬ್ಬಂದಿ ಅದನ್ನು ಕತ್ತರಿಸಿರುವ ಆರೋಪ ಕೇಳಿಬಂದಿದೆ. ಷರ್ಟ್ ಹಾಕ್ಕೊಂಡು ಹೋಗ್ಬಹುದು, ಷರ್ಟ್ ಒಳಗೆ ಜನಿವಾರ ಇರಬಾರದಾ. ಜನಿವಾರಕ್ಕೆ ನೇಣು ಹಾಕ್ಕೊಳ್ಳೋದಾದ್ರೆ, ಪ್ಯಾಂಟ್ಗೆ ಹಾಕ್ಕೊಳ್ಳಲ್ವಾ, ಜನಿವಾರದಲ್ಲೇನು AI ತಂತ್ರಜ್ಞಾನ ಅಡಗಿಸಿಟ್ಟಿದ್ದಾರಾ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.
KEA ಗೈಡ್ಲೈನ್ಸ್ನಲ್ಲಿ ಎಲ್ಲೂ ಜನಿವಾರದ ಉಲ್ಲೇಖವೇ ಇಲ್ಲ. ಗೈಡ್ಲೈನ್ಸ್ನಲ್ಲಿ ಇಲ್ಲದ ರೂಲ್ಸ್ ಅನ್ನು ಜಾರಿ ಮಾಡಿದ್ದು ಯಾರು. ಪ್ರಕರಣ ನಡೆದು 24 ಗಂಟೆಯಾದ್ರೂ ಸಿಬ್ಬಂದಿ ಮೇಲೆ ಕ್ರಮ ಯಾಕಿಲ್ಲ ಎಂದು ಕಿಡಿಕಾರುತ್ತಿದ್ದಾರೆ. ಶಿಕ್ಷಣ ಸಚಿವರೇ, ಜನಿವಾರಕ್ಕೆ ಕತ್ತರಿ ಹಾಕಿದ್ರವನ್ನು ಈಗಲೇ ಕಿತ್ತಾಕಿ. ಧಾರ್ಮಿಕ ನಂಬಿಕೆಗೆ ಧಕ್ಕೆ ತರೋ ಅಧಿಕಾರಿಗಳು ರಾಜ್ಯದಲ್ಲೇ ಇರಬಾರದು. ಜನಿವಾರ ಕತ್ತರಿಸಿ ಅಂತ ಸಿಬ್ಬಂದಿಗೆ ಆದೇಶ ಕೊಟ್ಟ ಅಧಿಕಾರಿಗಳು ಯಾರು. ವಿದ್ಯಾರ್ಥಿಯೊಬ್ಬನ ಭವಿಷ್ಯ ಮುಗಿಸಿದ ಅಧಿಕಾರಿಗಳಿಗೆ ಶಿಕ್ಷೆ ಏನು. ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇದೆಯಾ.. ಪಿತೂರಿ ನಡೆದಿದ್ಯಾ ಅನ್ನೋ ಚರ್ಚೆಗಳಾಗುತ್ತಿವೆ.
ಇದನ್ನೂ ಓದಿ : ಜನಾಕ್ರೋಶ ಯಾತ್ರೆಯಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಆರೋಪ – ವಿಜಯೇಂದ್ರ, ಅಶೋಕ್ ವಿರುದ್ಧ ಸೂರ್ಯ ಮುಕುಂದರಾಜ್ ದೂರು!
