ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಬ್ಯಾಟಲ್ಗೆ ಕೌಂಟ್ಡೌನ್ ಶುರುವಾಗಿದೆ. ಚಿನ್ನಸ್ವಾಮಿ ಬ್ಯಾಟಲ್ ಗ್ರೌಂಡ್ನಲ್ಲಿ ಇಂದು ಮುಖಾಮುಖಿಯಾಗ್ತಿರುವ ಉಭಯ ತಂಡಗಳ ಫೈಟ್ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ತವರಿನಲ್ಲಿ ಆಡ್ತಿರೋ 3ನೇ ಪಂದ್ಯವನ್ನಾದರೂ ಗೆಲ್ಲೋಕೆ ಪಣ ತೊಟ್ಟಿರುವ ಆರ್ಸಿಬಿಗೆ ಪಂಜಾಬ್ ಕಿಂಗ್ಸ್ ಎದುರು ಟಫ್ ಟಾಸ್ಕ್ ಎದುರಾಗಲಿದೆ.
ಹೌದು.. ರಾಜಸ್ಥಾನ್ ವಿರುದ್ಧ ರಾಯಲ್ ಜಯ ಸಾಧಿಸಿದ ಆರ್ಸಿಬಿ ಇದೀಗ ಪಂಜಾಬ್ಗೆ ಪಂಚ್ ಕೊಡೋಕೆ ರೆಡಿಯಾಗಿದೆ. ಹೋಮ್ಗ್ರೌಂಡ್ನಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿರೋ ಆರ್ಸಿಬಿ, ಪಂಜಾಬ್ ಕಿಂಗ್ ಮಣಿಸುವ ಕನಸಿನಲ್ಲಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಗೆದ್ದು ಬೀಗಬೇಕಂದ್ರೆ ಪಂಜಾಬ್ ಪವರ್ನ ಕಟ್ ಮಾಡಬೇಕಿದೆ.
ಪಂಜಾಬ್ ಕಿಂಗ್ಸ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಲ್ಪ ರನ್ಗಳಿಗೆ ಆಲೌಟ್ ಮಾಡಿ ಐತಿಹಾಸಿಕ ಜಯ ಸಾಧಿಸಿದೆ. ಹೀಗಾಗಿ ಬಲಿಷ್ಠ ತಂಡವೆನಿಸಿಕೊಂಡಿರೋ ಪಂಜಾಬ್ನ ಮಣಿಸಲು ಆರ್ಸಿಬಿ ಆಟಗಾರರು ಮಾಸ್ಟರ್ ಪ್ಲಾನ್ ರೂಪಿಸಬೇಕಿದೆ. ಪಂಜಾಬ್ ಕಿಂಗ್ಸ್ ಈವರೆಗೆ ಆಡಿದ 6 ಪಂದ್ಯಗಳಲ್ಲಿ 4 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇದೀಗ ದುಪ್ಪಟ್ಟು ಆತ್ಮ ವಿಶ್ವಾಸದೊಂದಿಗೆ ಆರ್ಸಿಬಿಯನ್ನು ಎದುರಿಸಲು ಸಿದ್ಧವಾಗಿದೆ. ಈ ಕಾದಾಟವು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ : ಇನ್ನು ಆರ್ಸಿಬಿ- ಪಂಜಾಬ್ನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ ಆಗೋ ಆತಂಕವಿದೆ. ಇಂದು ಸಂಜೆ 7:30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪ್ರತಿಷ್ಠೆಯ ಪಂದ್ಯದ ಸಮಯದಲ್ಲಿ ಹವಾಮಾನ ಹೇಗಿದೆ ಎಂದರೆ ಮಳೆಯಿಂದ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ. ಈ ಮಳೆ ಪಂದ್ಯದ ಆರಂಭದಲ್ಲಿ ಮಾತ್ರ ನಿರೀಕ್ಷೆ ಮಾಡಬಹುದು. ನಂತರ ಮಳೆ ನಿಂತು ಹೋಗುತ್ತದೆ. ಆದರೆ ಪಂದ್ಯ ಸುಗಮವಾಗಿ ನಡೆಯುತ್ತದೆ ಎನ್ನಲಾಗಿದೆ.
ಇನ್ನು ಎಂ. ಚಿನ್ನಸ್ವಾಮಿ ಮೈದಾನದ ಪಿಚ್ ಬ್ಯಾಟಿಂಗ್ ಸ್ನೇಹಿ ಆದರೂ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲಕರ. ಹೀಗಾಗಿ ಈ ಮೈದಾನದಲ್ಲಿ ಟಾಸ್ ಗೆದ್ದವರೇ ಬಾಸ್ ಎನ್ನಬಹುದು.
ಲೈವ್ : ಪಂದ್ಯದ ನೇರಪ್ರಸಾರವನ್ನ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.
ಇದನ್ನೂ ಓದಿ : ವಕ್ಫ್ ವಿರುದ್ಧ ಪ್ರತಿಭಟನೆ : ಮಂಗಳೂರಿನಲ್ಲಿ ಹೆದ್ದಾರಿ ತಡೆಯುವುದಕ್ಕೆ ಹೈಕೋರ್ಟ್ ನಿರ್ಬಂಧ!
