ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ ವರದಿ ಭಾರೀ ಸದ್ದು ಮಾಡುತ್ತಿದ್ದು, ವಿವಾದದ ಸುಳಿಗೆ ಸಿಲುಕಿ ಪ್ರಬಲ ಸಮುದಾಯಗಳ ಆಕ್ರೋಶದ ಕಿಚ್ಚಿಗೆ ಕಾರಣವಾಗಿರುವ ಜಾತಿ ಗಣತಿ ವರದಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ. ಜಾತಿ ಗಣತಿ ವರದಿ ಚರ್ಚೆಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಂಜೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ.
ಇದೀಗ ಈ ಬೆನ್ನಲ್ಲೇ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದಾರೆ.
ರಾಜಕೀಯ ಲೆಕ್ಕಾಚಾರವು ಸಾಮಾಜಿಕ ಸತ್ಯವನ್ನು ಅತಿಕ್ರಮಿಸಬಾರದು. ರಾಜ್ಯದ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿಯು ಅವೈಜ್ಞಾನಿಕ, ಪಕ್ಷಪಾತಿ ಮತ್ತು ದೋಷಪೂರಿತ ದತ್ತಾಂಶಗಳಿಂದ ತುಂಬಿದೆ. ಇದರ ಸ್ಪಷ್ಟ ರಾಜಕೀಯ ಉದ್ದೇಶವು ಜಾತಿಯ ಮೂಲಕ ಜನರ ವಿಭಜಿಸುವುದು ಮತ್ತು ಅವರನ್ನು ದಾರಿತಪ್ಪಿಸುವುದಾಗಿದೆ.

ಈ ದೋಷಪೂರಿತ ಜಾತಿ ಗಣತಿಯನ್ನು ತಿರಸ್ಕರಿಸಬೇಕೆಂದು ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಧಾರ್ ಮಾಹಿತಿ ಬಳಸಿಕೊಂಡು ನೂತನವಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಈ ಪತ್ರದ ಮೂಲಕ ಒತ್ತಾಯಿಸುತ್ತೇನೆ ಎಂದು ಶೋಭಾ ಕರಂದ್ಲಾಜೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದಿದ್ದಾರೆ.

ಇದನ್ನೂ ಓದಿ : ದೌರ್ಜನ್ಯದ ದೂರು ಕೊಡಲು ಬಂದ ತಾಯಿ-ಮಗಳ ಮೇಲೆ ದರ್ಪ.. ಚೇಳೂರು ಠಾಣೆ ಎಸ್ಐ ಹರೀಶ್ಗೆ 50 ಸಾವಿರ ದಂಡ!

Author: Btv Kannada
Post Views: 351