ದುರಂಹಕಾರ, ಮದ ನೆತ್ತಿಗೇರಿಸಿಕೊಂಡಿದ್ದ ರಜತ್ ಜೈಲಿಗೆ – ಏ.29ರವರೆಗೆ ಪರಪ್ಪನ ಅಗ್ರಹಾರವೇ ಗತಿ!

ಬೆಂಗಳೂರು : ಗಾಂಚಾಲಿ, ಕೊಬ್ಬಿನಿಂದ ಮೆರೆಯುತ್ತಿದ್ದ ಪೊರ್ಕಿ ರಜತ್​​ನ್ನು ಇಂದು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದರು. ಕಂಡ ಕಂಡಲ್ಲಿ ದರ್ಪ ತೋರಿಸುತ್ತಿದ್ದ ರಜತ್​ನನ್ನು ಬಸವೇಶ್ವರ ನಗರ ಪೊಲೀಸರು ‘ರಿಯಲ್​​​ ಮಚ್ಚು’ ನಾಶ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಬೆಂಗಳೂರಿನ 24ನೇ ACJM ನ್ಯಾಯಾಲಯ ವಿಚಾರಣೆ ನಡೆಸಿ ದುರಂಹಕಾರಿ ರಜತ್​ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಗಾಂಚಾಲಿ ರಜತ್​ಗೆ ಬೇಲ್ ಕ್ಯಾನ್ಸಲ್ ಆಗಿದ್ದು, ಇನ್ನು ಏಪ್ರಿಲ್​ 29ರವರೆಗೆ ರಜತ್​ಗೆ ಪರಪ್ಪನ ಅಗ್ರಹಾರವೇ ಗತಿ. ಮಚ್ಚು ನಾಶ ಮಾಡಿದ್ರೂ ಪೊಲೀಸರು ನನಗೇನೂ ಮಾಡಕ್ಕಾಗಲ್ಲ, ಏನ್​ ಕಿತ್ಕೊತ್ತೀರಾ ಎಂದು ಬಹಿರಂಗವಾಗಿ ದರ್ಪ ತೋರಿಸಿದ್ದ ಪೊರ್ಕಿ ರಜತ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಇತ್ತೀಚೆಗೆ ಒರಿಜಿನಲ್​​ ಮಚ್ಚು ನಾಶ ಮಾಡಿ ಮೋರಿಗೆ ಎಸೆದಿದ್ದೇನೆ ಎಂದು ರಜತ್ ಓಪನ್ ಆಗಿ ಹೇಳಿದ್ದರು. ಆ ಬಳಿಕ ಎಚ್ಚೆತ್ತ ಬಸವೇಶ್ವರ ನಗರ ಪೊಲೀಸ್​ ಇನ್ಸ್​ಪೆಕ್ಟರ್ ಚಿಕ್ಕಸ್ವಾಮಿಯವರು, ಇಂದು 11 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರಜತ್​ಗೆ ನೋಟಿಸ್​ ಜಾರಿಗೊಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಂತೆ NBW ಪ್ರಕರಣದಲ್ಲಿ ರಜತ್​ನ್ನು​ ಬಂಧಿಸಲಾಗಿದೆ. ಏನ್​ ಕಿತ್ಕೊತ್ತೀರಾ ಎಂದಿದ್ದ ರಜತ್​ಗೆ ಪೊಲೀರು ಥರ್ಡ್‌ ಗ್ರೇಡ್ ಟ್ರೀಟ್​ಮೆಂಟ್ ಕೊಟ್ಟಿದ್ದಾರೆ. ರಜತ್​ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಿರುವ ಪೊಲೀಸರು, ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರನ್ನೇ ಪ್ರಶ್ನೆ ಮಾಡಿದ್ದ ರಜತ್​ ಏಪ್ರಿಲ್​ 29ರವರೆಗೆ ಜೈಲಿನಲ್ಲಿ ಮುದ್ದೆ ಮುರಿಯೋದು ಫಿಕ್ಸ್.

ಇದನ್ನೂ ಓದಿ : ಸುಪ್ರೀಂ ಕೋರ್ಟ್​ನ ಮುಂದಿನ CJI ಆಗಿ ನ್ಯಾ. ಬಿ.ಆರ್ ಗವಾಯಿ ಹೆಸರು ಶಿಫಾರಸು!

Btv Kannada
Author: Btv Kannada

Read More