ಬೆಂಗಳೂರು : ಗಾಂಚಾಲಿ, ಕೊಬ್ಬಿನಿಂದ ಮೆರೆಯುತ್ತಿದ್ದ ಪೊರ್ಕಿ ರಜತ್ನ್ನು ಇಂದು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದರು. ಕಂಡ ಕಂಡಲ್ಲಿ ದರ್ಪ ತೋರಿಸುತ್ತಿದ್ದ ರಜತ್ನನ್ನು ಬಸವೇಶ್ವರ ನಗರ ಪೊಲೀಸರು ‘ರಿಯಲ್ ಮಚ್ಚು’ ನಾಶ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದರು. ಇದೀಗ ಬೆಂಗಳೂರಿನ 24ನೇ ACJM ನ್ಯಾಯಾಲಯ ವಿಚಾರಣೆ ನಡೆಸಿ ದುರಂಹಕಾರಿ ರಜತ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಗಾಂಚಾಲಿ ರಜತ್ಗೆ ಬೇಲ್ ಕ್ಯಾನ್ಸಲ್ ಆಗಿದ್ದು, ಇನ್ನು ಏಪ್ರಿಲ್ 29ರವರೆಗೆ ರಜತ್ಗೆ ಪರಪ್ಪನ ಅಗ್ರಹಾರವೇ ಗತಿ. ಮಚ್ಚು ನಾಶ ಮಾಡಿದ್ರೂ ಪೊಲೀಸರು ನನಗೇನೂ ಮಾಡಕ್ಕಾಗಲ್ಲ, ಏನ್ ಕಿತ್ಕೊತ್ತೀರಾ ಎಂದು ಬಹಿರಂಗವಾಗಿ ದರ್ಪ ತೋರಿಸಿದ್ದ ಪೊರ್ಕಿ ರಜತ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.
ಇತ್ತೀಚೆಗೆ ಒರಿಜಿನಲ್ ಮಚ್ಚು ನಾಶ ಮಾಡಿ ಮೋರಿಗೆ ಎಸೆದಿದ್ದೇನೆ ಎಂದು ರಜತ್ ಓಪನ್ ಆಗಿ ಹೇಳಿದ್ದರು. ಆ ಬಳಿಕ ಎಚ್ಚೆತ್ತ ಬಸವೇಶ್ವರ ನಗರ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿಯವರು, ಇಂದು 11 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರಜತ್ಗೆ ನೋಟಿಸ್ ಜಾರಿಗೊಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಂತೆ NBW ಪ್ರಕರಣದಲ್ಲಿ ರಜತ್ನ್ನು ಬಂಧಿಸಲಾಗಿದೆ. ಏನ್ ಕಿತ್ಕೊತ್ತೀರಾ ಎಂದಿದ್ದ ರಜತ್ಗೆ ಪೊಲೀರು ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ರಜತ್ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಿರುವ ಪೊಲೀಸರು, ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರನ್ನೇ ಪ್ರಶ್ನೆ ಮಾಡಿದ್ದ ರಜತ್ ಏಪ್ರಿಲ್ 29ರವರೆಗೆ ಜೈಲಿನಲ್ಲಿ ಮುದ್ದೆ ಮುರಿಯೋದು ಫಿಕ್ಸ್.
ಇದನ್ನೂ ಓದಿ : ಸುಪ್ರೀಂ ಕೋರ್ಟ್ನ ಮುಂದಿನ CJI ಆಗಿ ನ್ಯಾ. ಬಿ.ಆರ್ ಗವಾಯಿ ಹೆಸರು ಶಿಫಾರಸು!
