ಗಾಂಚಾಲಿ, ಕೊಬ್ಬಿನಿಂದ ಮೆರೆಯುತ್ತಿದ್ದ ಪೊರ್ಕಿ ರಜತ್ ಮತ್ತೆ ಅರೆಸ್ಟ್!

ಬೆಂಗಳೂರು : ಗಾಂಚಾಲಿ, ಕೊಬ್ಬಿನಿಂದ ಮೆರೆಯುತ್ತಿದ್ದ ಪೊರ್ಕಿ ರಜತ್​​ನ್ನು ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಕಂಡ ಕಂಡಲ್ಲಿ ದರ್ಪ ತೋರಿಸುತ್ತಿದ್ದ ರಜತ್​ನನ್ನು ಬಸವೇಶ್ವರ ನಗರ ಪೊಲೀಸರು ‘ರಿಯಲ್​​​ ಮಚ್ಚು’ ನಾಶ ಮಾಡಿದ ಪ್ರಕರಣದಲ್ಲಿ ಕೊನೆಗೂ ಬಂಧಿಸಿದ್ದಾರೆ.

ಇತ್ತೀಚೆಗೆ ಒರಿಜಿನಲ್​​ ಮಚ್ಚು ನಾಶ ಮಾಡಿ ಮೋರಿಗೆ ಎಸೆದಿದ್ದೇನೆ ಎಂದು ರಜತ್ ಓಪನ್ ಆಗಿ ಹೇಳಿದ್ದರು. ಮಚ್ಚು ನಾಶ ಮಾಡಿದ್ರೂ ಪೊಲೀಸರು ನನಗೇನೂ ಮಾಡಕ್ಕಾಗಲ್ಲ, ಏನ್​ ಕಿತ್ಕೊತ್ತೀರಾ ಎಂದು ಬಹಿರಂಗವಾಗಿ ದರ್ಪ ತೋರಿಸಿದ್ದರು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.

ಆ ಬಳಿಕ ಎಚ್ಚೆತ್ತ ಬಸವೇಶ್ವರ ನಗರ ಪೊಲೀಸ್​ ಇನ್ಸ್​ಪೆಕ್ಟರ್ ಚಿಕ್ಕಸ್ವಾಮಿಯವರು, ಇಂದು 11 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ರಜತ್​ಗೆ ನೋಟಿಸ್​ ಜಾರಿಗೊಳಿಸಿದ್ದರು. ಅದರಂತೆ ಇಂದು ವಿಚಾರಣೆಗೆ ಹಾಜರಾಗುತ್ತಿದ್ದಂತೆ NBW ಪ್ರಕರಣದಲ್ಲಿ ರಜತ್​ನ್ನು​ ಬಂಧಿಸಲಾಗಿದೆ. ಏನ್​ ಕಿತ್ಕೊತ್ತೀರಾ ಎಂದಿದ್ದ ರಜತ್​ಗೆ ಪೊಲೀರು ಥರ್ಡ್‌ ಗ್ರೇಡ್ ಟ್ರೀಟ್​ಮೆಂಟ್ ಕೊಟ್ಟಿದ್ದಾರೆ. ರಜತ್​ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಿರುವ ಪೊಲೀಸರು, ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರನ್ನೇ ಪ್ರಶ್ನೆ ಮಾಡಿದ್ದ ಪೊರ್ಕಿ ರಜತ್​ಗೆ ಇದೀಗ ಮತ್ತೆ ಜೈಲು ವಾಸ ಅನುಭವಿಸುವಂತಾಗಿದೆ.

ಇದನ್ನೂ ಓದಿ : ಯತ್ನಾಳ್ ಉಚ್ಚಾಟನೆ ಬಳಿಕ ಮೊದಲ ಬಾರಿ ವಿಜಯಪುರಕ್ಕೆ ವಿಜಯೇಂದ್ರ – ನಾಳಿನ ಜನಾಕ್ರೋಶ ಯಾತ್ರೆಯಲ್ಲಿ ಭಾಗಿ.. ಪೊಲೀಸರ ಬಿಗಿ ಭದ್ರತೆ!

Btv Kannada
Author: Btv Kannada

Read More