ಹುಬ್ಬಳ್ಳಿ ಕಾಮುಕನ ಎನ್ಕೌಂಟರ್ ಕೇಸ್ – ಆರೋಪಿ ಮೃತದೇಹ ಶವಸಂಸ್ಕಾರಕ್ಕೆ ತಡೆ ಕೋರಿ ಹೈಕೋರ್ಟ್​ಗೆ ಮನವಿ!

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಆರೋಪಿ ಎನ್ಕೌಂಟರ್​ನಲ್ಲಿ ಸಾವನ್ನಪ್ಪಿದ್ದು, ಇದೀಗ ಆರೋಪಿ ಮೃತದೇಹ ಶವಸಂಸ್ಕಾರಕ್ಕೆ ತಡೆ ಕೋರಿ ಹೈಕೋರ್ಟ್​ಗೆ ಮನವಿ ಸಲ್ಲಿಸಲಾಗಿದೆ.

ಎನ್ಕೌಂಟರ್​ಗೆ ಗುರಿಯಾದ ರಿತೇಶ್ ಶವಸಂಸ್ಕಾರ ಕಾರ್ಯಕ್ಕೆ ತಡೆ ಕೋರಿ ಮಹಿಳಾ ವಕೀಲೆಯೊಬ್ಬರು ನೇರವಾಗಿ ಸಿಜೆ ಪೀಠಕ್ಕೆ ಮನವಿ ಮಾಡಿದ್ದಾರೆ. ಎನ್ಕೌಂಟರ್ ಕುರಿತಂತೆ ಕೆಲವು ಸಂಶಯಗಳು ಇವೆ. ಮೃತ ದೇಹವನ್ನು ಶವಸಂಸ್ಕಾರ ಮಾಡಿದಲ್ಲಿ ಸಾಕ್ಷ್ಯಗಳ ನಾಶವಾಗಲಿದೆ, ಹೀಗಾಗಿ ಶವ ಸಂಸ್ಕಾರಕ್ಕೆ ತಡೆ ನೀಡಬೇಕು ಎಂದು ಮಹಿಳಾ ವಕೀಲೆಯೊಬ್ಬರು ಮನವಿ ಮಾಡಿದ್ದಾರೆ.

ಅರ್ಜಿ ಸಲ್ಲಿಸಿದ ಬಳಿಕ  ಸಿ.ಜೆ ಎನ್. ವಿ. ಅಂಜಾರಿಯಾ ಮತ್ತು ನ್ಯಾ.ಕೆ.ವಿ.ಅರವಿಂದ್ ಅವರಿದ್ದ ಪೀಠ ಇಂದು ಮಧ್ಯಾಹ್ನ 3:30ಕ್ಕೆ ವಿಚಾರಣೆ ನಡೆಸುವುದಾಗಿ ಸೂಚನೆ ನೀಡಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ – 5 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ!

Btv Kannada
Author: Btv Kannada

Read More