ಬೆಂಗಳೂರು : BDA ಭ್ರಷ್ಟಚಾರ ಕಿಂಗ್ಪಿನ್ಗಳಿಗೆ ಇದೀಗ ಸಂಕಷ್ಟ ಶುರುವಾಗಿದ್ದು, ಪೊಲೀಸರ ಮೇಲೆ ಪ್ರೇಷರ್ ಹಾಕಿ ದೂರು ಕೊಟ್ಟ ವ್ಯಕ್ತಿಯ ವಿರುದ್ಧವೇ ಭ್ರಷ್ಟ ಬಿಡಿಎ ಅಧಿಕಾರಿಗಳು FIR ದಾಖಲಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಂಪ್ಲೆಂಟ್ ಕೊಟ್ಟು FIR ಮಾಡಿಸಿದವರಿಗೆ ಈಗ ತನಿಖೆಯ ಬಿಸಿ ತಟ್ಟಿದ್ದು, ಬಿಡಿಎ ಅಧಿಕಾರಿಗಳಾದ ಅಶೋಕ್, ಅಶೋಕ್ ಭಾಗಿಗೆ ಸಂಕಷ್ಟ ಎದುರಾಗಿದೆ.
ಬಿಡಿಎನಲ್ಲಿ 150 ಕೋಟಿಗೂ ಅಧಿಕ ಮೊತ್ತದ ಭ್ರಷ್ಟಾಚಾರ ನಡೆದಿದ್ದು, ಅಕ್ರಮದ ವಿರುದ್ಧ ಧ್ವನಿ ಎತ್ತಿದವರ ವಿರುದ್ದವೇ FIR ದಾಖಲಾಗಿದೆ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಕೆಂಗೇರಿ ಪೊಲೀಸರು ವಿಚಾರಣೆ ನಡೆಸದೆ FIR ದಾಖಲಿಸಿದ್ದಾರೆ. ಕೆಂಗೇರಿ ಪೊಲೀಸರ ಈ ಕ್ರಮದ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದ್ದು, AEEಗಳಾದ ಅಶೋಕ್, ಅಶೋಕ್ ಭಾಗಿ ವಿರುದ್ಧ ಶರತ್ ಬಾಬು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಭ್ರಷ್ಟ ಬಿಡಿಎ ಅಧಿಕಾರಿಗಳು ಕಾಮಗಾರಿ ನಡೆಸದೆ ಬಿಲ್ ನೀಡಿದ್ದು, ಬಿಡಿಎ ದಕ್ಷಿಣ ವಿಭಾಗದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶರತ್ ಬಾಬು ಆರೋಪಿಸಿದ್ದಾರೆ. ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸಗಳ ನೆಪದಲ್ಲಿ ಹಣ ಲೂಟಿ ಮಾಡಲಾಗಿದ್ದು, ಇಬ್ಬರು ಭ್ರಷ್ಟರ ವಿರುದ್ಧ ದೂರುದಾರರು ಸಾಕ್ಷ್ಯ ಸಮೇತ ಆಪಾದಿಸಿದ್ದಾರೆ. ಈ ಕುರಿತು ಭ್ರಷ್ಟ ಇಂಜಿನಿಯರ್ಗಳಾದ ಅಶೋಕ್-ಅಶೋಕ್ ಭಾಗಿ ವಿರುದ್ಧ EDಗೆ ದೂರು ಸಲ್ಲಿಸಲಾಗಿದೆ.
ಈ ಪ್ರಕರಣವನ್ನು ಇ.ಡಿ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಭ್ರಷ್ಟ ಅಧಿಕಾರಿಗಳ ಜತೆಗೆ ಪೊಲೀಸರ ವಿರುದ್ಧ ಇ.ಡಿಗೆ ದೂರು ಸಲ್ಲಿಸಲಾಗಿದ್ದು, ಭ್ರಷ್ಟ ಅಧಿಕಾರಿಗಳ ಮಾತಿನಂತೆ FIR ಮಾಡಿದ ಪೊಲೀಸರಿಗೂ ಸಂಕಷ್ಟ ಎದುರಾಗಲಿದೆ.
ಇದನ್ನೂ ಓದಿ : ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ.. ಚಾಪ್ಟರ್-3 ಬಗ್ಗೆ ಹೊಂಬಾಳೆಯಿಂದ ಬಿಗ್ ಅಪ್ಡೇಟ್!
