ಎಣ್ಣೆ ಹೊಡೆದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ – ಸಚಿವ ಪರಮೇಶ್ವರ್ ಸ್ಪಷ್ಟನೆ!

ಬೆಂಗಳೂರು : ನ್ಯೂ ಇಯರ್ ಸೆಲೆಬ್ರೇಷನ್​ನಲ್ಲಿ ಕುಡಿದು ಟೈಟಾದ್ರೆ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ, ಕುಡಿದು ನಡಿಯೋಕೆ ಆಗಲ್ಲ, ಪ್ರಜ್ಞೆ ಇರಲ್ವೋ ಅಂತವರಿಗೆ ಬಿಡ್ತೀವಿ. ನಾವು 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ,
ಅಲ್ಲಿಗೆ ಫಸ್ಟ್​ ಕರ್ಕೊಂಡು ಹೋಗಿ, ಕೆಲ ಹೊತ್ತು ಇಟ್ಕೊತಾರೆ. ಬಳಿಕ ಅವರ ಅಡ್ರೆಸ್​ ತಗೊಂಡು ಮನೆಗೆ ಕಳಿಸೋ ವ್ಯವಸ್ಥೆ ಮಾಡ್ತೀವಿ ಎಂದಿದ್ದಾರೆ.

ವಿಶೇಷವಾಗಿ ಹೆಣ್ಣು ಮಕ್ಕಳನ್ನು ಅವರ ಮನೆಗೆ ಕಳಿಸುತ್ತೇವೆ. ಆ ಸಂದರ್ಭದಲ್ಲಿ ಯಾವ, ಯಾವ ಪರಿಸ್ಥಿತಿಲಿ ಇರ್ತಾರೆ ಹೇಳಕ್ ಬರಲ್ಲ, ಅವರಿಗೆ ಯಾರು ಏನ್ ಬೇಕಾದ್ರು ಮಾಡಬಹುದಲ್ಲ, ಆ ಸೇಫ್ಟಿಗೆ ಇದು ಮಾಡಿದ್ದೇವೆ. 12 ಗಂಟೆ ಮೇಲೆ ಸ್ವಲ್ಪ ಹೆಚ್ಚು ಜನ ಸೇರ್ತಾರೆ ಎಲ್ಲವೂ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರು : ‘ರಕ್ಕಸಪುರದೋಳ್’ನಲ್ಲಿ ರಾಜ್ ಬಿ ಶೆಟ್ಟಿ ದರ್ಶನ – ಚಿತ್ರದಲ್ಲಿ ಶೆಟ್ರು ರಕ್ಷಕನೋ.. ರಾಕ್ಷಸನೋ?

Btv Kannada
Author: Btv Kannada

Read More