ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಇದೀಗ ಚಿಕ್ಕಜಾಲ ಪೊಲೀಸ್ ಸಬ್ಇನ್ಸ್ಪೆಕ್ಟರ್ ಭ್ರಷ್ಟಾಚಾರದ ಕರ್ಮಕಾಂಡ ಬಯಲಾಗಿದೆ. ಚಿಕ್ಕಜಾಲ ಸಬ್ಇನ್ಸ್ಪೆಕ್ಟರ್ ಶಿವಣ್ಣ 420 ಕೇಸ್ ಬಿ-ರಿಪೋರ್ಟ್ಗೆ 3 ಲಕ್ಷ ಲಂಚ ಕೇಳಿದ್ದು, ರೌಡಿಶೀಟರ್ಗಳೇ ಈಗ ಪೊಲೀಸ್ ಸಬ್ಇನ್ಸ್ಪೆಕ್ಟರ್ ವಿರುದ್ಧ ದೂರು ನೀಡುವ ದುರ್ಗತಿ ಬಂದಿದೆ.

ರವಿಕುಮಾರ್ ಚಿಕ್ಕಜಾಲದಲ್ಲಿ 10 ವರ್ಷದಿಂದ ರೌಡಿಶೀಟರ್ ಆಗಿದ್ದು, ಆತನ ಮೇಲಿನ 420 ಕೇಸ್ ಬಿ-ರಿಪೋರ್ಟ್ಗೆ ಚಿಕ್ಕಜಾಲ PSI 3 ಲಕ್ಷ ಡಿಮಾಂಡ್ ಮಾಡಿದ್ದಾನೆ. ರೌಡಿಪಟ್ಟಿಯಿಂದ ಹೆಸರು ತೆಗೆಯುವಂತೆಯೂ ರವಿಕುಮಾರ್ ಸಬ್ಇನ್ಸ್ಪೆಕ್ಟರ್ಗೆ ಮನವಿ ಮಾಡಿದ್ದ. ರೌಡಿಶೀಟ್ನಿಂದ ಕೈಬಿಡಬೇಕಾದ್ರೆ, 420 ಕೇಸ್ ಬಿ-ರಿಪೋರ್ಟ್ಗೆ PSI 3 ಲಕ್ಷ ಲಂಚ ಕೇಳಿದ್ದು, ಇದೀಗ ಚಿಕ್ಕಜಾಲ ಸಬ್ಇನ್ಸ್ಪೆಕ್ಟರ್ ಶಿವಣ್ಣ ವಿರುದ್ಧ ರೌಡಿಶೀಟರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾನೆ.

ರೌಡಿಶೀಟರ್ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಚಿಕ್ಕಜಾಲ ಸಬ್ಇನ್ಸ್ಪೆಕ್ಟರ್ಗೆ ಬಲೆ ಬೀಸಿದ್ದು, PSI ಶಿವಣ್ಣ, ರೌಡಿಶೀಟರ್ ರವಿಕುಮಾರ್ನಿಂದ ಹಣ ಪಡೆಯುತ್ತಿದ್ದಾಗಲೇ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಚಿಕ್ಕಜಾಲ ಸಬ್ಇನ್ಸ್ಪೆಕ್ಟರ್ ಶಿವಣ್ಣ ಕ್ಯಾಶ್ ಜೊತೆಗೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, PSI ಅನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಗೃಹ ಸಚಿವರೇ, ರೌಡಿಶೀಟರ್ನಿಂದ ಲಂಚ ಕೇಳಿದ ಸಬ್ಇನ್ಸ್ಪೆಕ್ಟರ್ ಇಲಾಖೆಯಲ್ಲಿ ಇರಕೂಡದು. ಲೋಕಾಯುಕ್ತ ರಿಪೋರ್ಟ್ಗೆ ಕಾಯಬೇಡಿ PSI ಶಿವಣ್ಣನನ್ನು ಡಿಸ್ಮಿಸ್ ಮಾಡಿ.
ಇದನ್ನೂ ಓದಿ : ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ – ಅಪಘಾತವೆಂದು ಬಿಂಬಿಸಿದ್ದ ಪತಿ ಅರೆಸ್ಟ್!







