ಬಾಗಲಕೋಟೆ : ಬುದ್ಧಿಮಾಂದ್ಯ ಬಾಲಕನ ಮೇಲೆ ರಾಕ್ಷಸಿ ಕೃತ್ಯ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ನವನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಬಾಲಕನಿಗೆ ಚಿತ್ರಹಿಂಸೆ ನೀಡಿ ಜಾತಿ ನಿಂದನೆ ಮಾಡಿದ ಹಿನ್ನೆಲೆ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ.

ಅಕ್ಷಯ ಹಿಂದೂಲಕರ್, ರವಿಕಾಂತ, ಅಶೋಕ್, ಅಕ್ಷಯ ಪತ್ನಿ ಆನಂದಿ ಹಿಂದೂಲಕರ್ ಮೇಲೆ FIR ದಾಖಲಾಗಿದೆ. ನವನಗರ ಠಾಣೆಯಲ್ಲಿ ಅಪರಾಧ ಪ್ರಕರಣ ಸಂಖ್ಯೆ 211/2025 ಅಡಿ ಭಾರತೀಯ ನ್ಯಾಯ ಸಂಹತೆ-2023 ಕಲಂ.115(2), 118(1), 118(2), 126(2), 351(2), 3(5), ಜೆ.ಜೆ.ಕಾಯ್ದೆ ಕಲಂ.75,82, ಆರ್.ಪಿ.ಡಬ್ಲೂ.ಡಿ ಕಾಯ್ದೆ ಕಲಂ.92(ಬಿ), ಎಸ್.ಸಿ/ಎಸ್.ಟಿ ಕಾಯ್ದೆ-2015 ಕಲಂ.3(1)(ಆರ್)(ಎಸ್),3(2)(vಎ) ಅಡಿ FIR ದಾಖಲಾಗಿದೆ.

ಬಾಗಲಕೋಟೆ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದು, ಕಳೆದ ಎರಡು ತಿಂಗಳುಗಳ ಹಿಂದೆ ನಡೆದ ಹಲ್ಲೆ ಪ್ರಕರಣ ನಿನ್ನೆಯಷ್ಟೇ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ : ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ – ಬೈಕ್ ಸವಾರ ಸ್ಥಳದಲ್ಲೇ ಸಾವು!
Author: Btv Kannada
Post Views: 334







