ನೈಸ್ ಮುಖ್ಯಸ್ಥಅಶೋಕ್​ ಖೇಣಿ ಒಡೆತನದ ಕಂಪನಿಗೆ ಮತ್ತೊಂದು ಗರಿ – ದೇಶದ 16ನೇ CIDC ವಿಶ್ವಕರ್ಮ ಪ್ರಶಸ್ತಿ ಪಡೆದ NECE!

ಮಾಜಿ ಶಾಸಕ ಹಾಗೂ ನೈಸ್ ಮುಖ್ಯಸ್ಥಅಶೋಕ್​ ಖೇಣಿ ಅವರ ಒಡೆತನದ ಕಂಪನಿಗೆ ಮತ್ತೊಂದು ಪ್ರಶಸ್ತಿ ಗರಿ ಒಲಿದಿದೆ. ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಗೆ 16ನೇ CIDC ವಿಶ್ವಕರ್ಮ ಪ್ರಶಸ್ತಿ ಒಲಿದಿದೆ. 2025ರಲ್ಲಿ BMIC ಯೋಜನೆಗಾಗಿ ಪ್ರತಿಷ್ಠಿತ ಅತ್ಯುತ್ತಮ ನಿರ್ಮಾಣ ಯೋಜನೆ ಸಾಧನೆಗಾಗಿ ಪ್ರಶಸ್ತಿ ಸಂದಿದೆ. ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾದ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸ್ (NECE) ಲಿಮಿಟೆಡ್ ಕಂಪನಿಗೆ ಪ್ರಶಸ್ತಿ ದೊರೆತಿದೆ.

ಭಾರತ ಸರ್ಕಾರದ ಯೋಜನಾ ಆಯೋಗ ಮತ್ತು ನಿರ್ಮಾಣ ಉದ್ಯಮವು ಜಂಟಿಯಾಗಿ16 ನೇ CIDC ವಿಶ್ವಕರ್ಮ ಪ್ರಶಸ್ತಿ, ಉದ್ಯಮ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆ. ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (BMIC) ಯೋಜನೆಯಲ್ಲಿ NECE ಲಿಮಿಟೆಡ್‌ ಕಂಪನಿ ಅತ್ಯುತ್ತಮ ಕಾರ್ಯವನ್ನು ಮಾಡಿದೆ. ನೈಸ್​ ಸಂಸ್ಥೆಯ ಕಾರ್ಯವನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಈ ಬಗ್ಗೆ ಮಾತನಾಡಿದ ನಂದಿ ಎಕನಾಮಿಕ್ ಕಾರಿಡಾರ್ ಎಂಟರ್‌ಪ್ರೈಸ್ (NECE) ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಅವರು, ಈ ಪ್ರತಿಷ್ಠಿತ ಪ್ರಶಸ್ತಿ ನಮ್ಮ ಕಾರ್ಯಕ್ಕೆ ಸಂದ ಫಲವಾಗಿದ್ದು, ನಾವು ಅಸಾಧಾರಣ ಮೂಲಸೌಕರ್ಯ ಯೋಜನೆಗಳನ್ನು ತಲುಪಿಸುವಲ್ಲಿ ನಮ್ಮ ತಂಡದ ಸಮರ್ಪಣೆ ಮತ್ತು ಪರಿಣತಿಯನ್ನು ಹೆಚ್ಚಿಸಿದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ವಿಶ್ವ ದರ್ಜೆಯ ಮೂಲ ಸೌಕರ್ಯವನ್ನು ರಚಿಸುವ ನಮ್ಮ ಕಂಪನಿಯ ದೃಷ್ಟಿಕೋನಕ್ಕೆ BMIC ಯೋಜನೆಯು ಸಾಕ್ಷಿಯಾಗಿದೆ ಎಂದ್ರು.

ಏಪ್ರಿಲ್ 11ರಂದು ನಿನ್ನೆ ದಿನ ನವದೆಹಲಿಯ ಜನಪಥ್‌ನಲ್ಲಿರುವ ಡಾ.ಅಂಬೇಡ್ಕರ್ ಅಂತರ ರಾಷ್ಟ್ರೀಯ ಕೇಂದ್ರದ ಭೀಮ್ ಸಭಾಂಗಣದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು. ಪೂರ್ವ ನಿರ್ಧರಿತ ಕಾರ್ಯಕ್ರಮಗಳ ಕಾರಣ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿಯವರ ಪರವಾಗಿ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಶೆಟ್ಟಿ ಮತ್ತು ತಾಂತ್ರಿಕ ಮುಖ್ಯಸ್ಥ ಪ್ರಸಾದ್ ಅವರು ಪ್ರಶಸ್ತಿ ಸ್ವೀಕರಿಸಿದ್ರು.

ಮೂಲಸೌಕರ್ಯ ವಿಭಾಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಏಕೈಕ ಕಂಪನಿ NECE ಲಿಮಿಟೆಡ್ ಆಗಿದೆ. CIDC ವಿಶ್ವಕರ್ಮ ಪ್ರಶಸ್ತಿ ನಿರ್ಮಾಣ ಉದ್ಯಮದಲ್ಲಿನ ಶ್ರೇಷ್ಠತೆ ಗುರುತಿಸುತ್ತದೆ. ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ ಅತ್ಯುತ್ತಮ ಯೋಜನೆಗಳು ಮತ್ತು ವ್ಯಕ್ತಿಗಳನ್ನು ಪ್ರಶಸ್ತಿಗಳು ಗೌರವಿಸುತ್ತವೆ.

ಇನ್ನು NECE ಲಿಮಿಟೆಡ್ ಕರ್ನಾಟಕದ ಬೆಂಗಳೂರು ನಗರದಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರುವ 25 ವರ್ಷ ಹಳೆಯ ಕಂಪನಿಯಾಗಿದೆ. ನಗರ ಮೂಲಸೌಕರ್ಯ ಸವಾಲುಗಳಿಗೆ ನವೀನ ಮತ್ತು ಸುಸ್ಥಿರ ಪರಿಹಾರಗಳನ್ನು ರಚಿಸುವತ್ತ ಗಮನಹರಿಸುವ ಮೂಲಕ ಕಂಪನಿಯು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಬೀದರ್ ಮಣ್ಣಿನ ಮಗ ಎಂದೇ ಗುರುತಿಸಿ ಕೊಂಡಿರುವ ಮಾಜಿ ಶಾಸಕ ಅಶೋಕ ಖೇಣಿಯವರು ಈ ಕಂಪನಿ ಸ್ಥಾಪಿಸಿದ್ದು ಅವರ ಸಾಧನೆಗೆ ಬೀದರ್ ಸೇರಿ ರಾಜ್ಯದ ಜನತೆ ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಆರ್​​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್​​​​​​ ಪಂದ್ಯದ ವೇಳೆ ಬಾಲ್ ಟು ಬಾಲ್ ಬೆಟ್ಟಿಂಗ್ – 85 ಲಕ್ಷ ಹಣ ಸೀಜ್..​​​ ಮೂವರ ಬಂಧನ!

Btv Kannada
Author: Btv Kannada

Read More

Read More