ಬೆಂಗಳೂರು : ಇಂದಿನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಯಲ್ ಪ್ರಾರಂಭ ಆಗುತ್ತಿದ್ದು, ಮೊದಲ ಹಂತವಾಗಿ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ, ತಾಯಿ ರತ್ನಪ್ರಭಾ ಸಾಕ್ಷಿ ಹೇಳಲಿದ್ದಾರೆ. ಕಾನೂನು ಪ್ರಕ್ರಿಯೆಯ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದ್ದು, A-1 ಆರೋಪಿ ಪವಿತ್ರಾ ಗೌಡ ಪರವಾಗಿ ಎಸ್.ಬಾಲನ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿದ್ದಾರೆ. ಇಬ್ಬರು ಕಾನೂನು ದಿಗ್ಗಜರ ನಡುವಿನ ರೋಚಕ ಸಮರ ಇಂದಿನಿಂದ ಆರಂಭವಾಗಲಿದೆ.

ಎಸ್.ಬಾಲನ್ ಅವರು ಕ್ರಾಸ್ ಎಕ್ಸಾಮಿನೇಷನ್ನಲ್ಲಿ ನಂಬರ್-1 ಕ್ರಿಮಿನಲ್ ವಕೀಲ ಎನಿಸಿಕೊಂಡಿದ್ದಾರೆ. ಅದೇ ರೀತಿ ಪ್ರಸನ್ನ ಕುಮಾರ್ ಕ್ರಿಮಿನಲ್ ಕೇಸ್ಗಳಲ್ಲಿ ಅತ್ಯಂತ ಪರಿಣಿತಿ ಪಡೆದಿದ್ದು, ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕೋರ್ಟ್ ಟ್ರಯಲ್ ಇಂದಿನಿಂದ ಆರಂಭವಾಗಲಿದ್ದು, ಮೊದಲು, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಸಾಕ್ಷಿಗಳ ಹೇಳಿಕೆಗಳನ್ನು ನ್ಯಾಯಾಧೀಶರ ಮುಂದೆ ದಾಖಲಿಸುತ್ತಾರೆ.

ನಂತರ ಹಿರಿಯ ಕ್ರಿಮಿನಲ್ ವಕೀಲ ಎಸ್.ಬಾಲನ್ ಕ್ರಾಸ್ ಎಕ್ಸಾಮಿನೇಷನ್ ಆರಂಭವಾಗಲಿದೆ. ಇದನ್ನು ನೋಡಲೆಂದೇ ಇಂದು ಕೋರ್ಟಿಗೆ ನೂರಾರು ವಕೀಲರು ಆಗಮಿಸುತ್ತಾರೆ. ವಕೀಲಿಕೆ ವೃತ್ತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಕಾನೂನಿನ ಪಂಡಿತರು, ಹಲವು ಪೊಲೀಸ್ ಅಧಿಕಾರಿಗಳು ಕೋರ್ಟ್ಗೆ ಆಗಮಿಸಿ ಟ್ರಯಲ್ ವೀಕ್ಷಣೆ ಮಾಡ್ತಾರೆ. ಎಂತಹದೇ ಸಾಕ್ಷಿ ಇದ್ರೂ ಆ ಸಾಕ್ಷಿಯಲ್ಲಿನ ಲೋಪ ಪತ್ತೆ ಹಚ್ಚುವುದು ಬಾಲನ್ ಚಾಕಚಕ್ಯತೆ.

ನಿನ್ನೆ SPP ಪ್ರಸನ್ನ ಕುಮಾರ್ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಹಿರಿಯ ವಕೀಲ ಎಸ್.ಬಾಲನ್ ವಾರಕ್ಕೂ ಮುನ್ನ ಇಡೀ ದಿನ ಸ್ಥಳ ಪರಿಶೀಲನೆ ನಡೆಸಿದ್ದರು. ಕ್ರಾಸ್ ಎಕ್ಸಾಮಿನೇಷನ್ನಲ್ಲಿ ಎಸ್. ಬಾಲನ್ ಅವರನ್ನು ಮೀರಿಸುವವರೇ ಇಲ್ಲ. ಎಸ್. ಬಾಲನ್ ಅವರ ಕ್ರಾಸ್ ಎಕ್ಸಾಮಿನೇಷನ್ ಎದುರಿಸುವುದು ಸಾಕ್ಷಿಗಳಿಗೆ ಸವಾಲಾಗಿರಲಿದೆ. ಎಂತಹದ್ದೇ ಸಂದರ್ಭದಲ್ಲೂ ಸಾಕ್ಷಿಗಳ ಬಾಯಿಂದ ಸತ್ಯ ಹೇಳಿಸುವ ಸಾಮರ್ಥ್ಯ ಅವರಿಗೆ ಇದೆ. ಇಬ್ಬರು ಘಟಾನುಘಟಿ ವಕೀಲರಿಂದ ನಟ ದರ್ಶನ್ ಪ್ರಕರಣ ಕಳೆಗಟ್ಟಿದೆ.

ಈಗಾಗಲೇ ಪ್ರಕರಣದ ಪ್ರಾಸಿಕ್ಯೂಷನ್ ಮನವಿಯ ಮೇರೆಗೆ ಎರಡು ಸಾಕ್ಷಿಗೂ ಸಮನ್ಸ್ ನೀಡಲಾಗಿತ್ತು. ಇಂದು ಇಬ್ಬರೂ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದು, ಘಟನಾವಳಿಯ ಬಗ್ಗೆ ಸಂಪೂರ್ಣ ಹೇಳಿಕೆಯನ್ನು ನುಡಿಯಲಿದ್ದಾರೆ. ರೇಣುಕಾಸ್ವಾಮಿ ಯಾವಾಗ ಮನೆಯಿಂದ ಹೊರಟ, ಮಧ್ಯಾಹ್ನ ಊಟಕ್ಕೆ ಬರೋದಿಲ್ಲ ಅಂದಿದ್ದು, ಬಳಿಕ ಸಾವಿನ ವಿಚಾರ ತಿಳಿದಿದ್ದು, ಈ ಎಲ್ಲಾ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ.
ಇದನ್ನೂ ಓದಿ : ನ್ಯೂ ಇಯರ್ ಸೆಲೆಬ್ರೇಷನ್ಗೆ ಹೊಸ ರೂಲ್ಸ್ – ಪಬ್, ಕ್ಲಬ್, ಹೋಟೆಲ್ಗಳಿಗೆ ಮಾರ್ಗಸೂಚಿ ಬಿಡುಗಡೆ!







