ಮಂಡ್ಯ : ಹಣಕಾಸು ವಿಚಾರಕ್ಕೆ ಕಂಬಕ್ಕೆ ಕಟ್ಟಿಹಾಕಿ ಯುವಕನಿಗೆ ಥಳಿತ!

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದಲ್ಲಿ ಹಣಕಾಸಿನ ವಿಚಾರಕ್ಕೆ ಗ್ರಾಮದ ನಾಗೇಶ್ ಎಂಬಾತ ಚಲುವೇಶ್ ಎಂಬುವರಿಗೆ ಚಾಕು ತೋರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ವೇಳೆ ಉಂಟಾದ ಮಾತಿನ ಚಕಮಕಿಯಲ್ಲಿ ಚಲುವೇಶ್ ಮತ್ತು ಆತನ ಸ್ನೇಹಿತರು ಸೇರಿ ನಾಗೇಶ್‌ನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲ್ಲೆಗೊಳಗಾದ ನಾಗೇಶ್ ಪತ್ನಿ ಹಲ್ಲೆ ನಡೆಸಿದವರ ವಿರುದ್ಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ವೆಬ್ ಸೀರೀಸ್ ನಿರ್ದೇಶಿಸಿದ ರಮೇಶ್ ಇಂದಿರಾ.. ಏ.25ರಿಂದ ZEE5ನಲ್ಲಿ ʼಅಯ್ಯನ ಮನೆʼ ಸ್ಟ್ರೀಮಿಂಗ್!

Btv Kannada
Author: Btv Kannada

Read More

Read More