ಜವರಾಯನ ಅಟ್ಟಹಾಸ – ಭೀಕರ ಅಪಘಾತಕ್ಕೆ ಮೂವರು ಸ್ನೇಹಿತರು ದುರ್ಮರಣ!

ಬೆಂಗಳೂರು : KSRTC ಬಸ್ – ಕಿಯಾ ಕಾರು ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ನೇಹಿತರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಬರ್ತಿದ್ದ ಬಸ್ಸಿಗೆ ಚಿಕ್ಕಬಳ್ಳಾಪುರದಿಂದ ಬರ್ತಿದ್ದ ಕಾರು ಡಿಕ್ಕಿಯಾಗಿದೆ. ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಎದುರು ಬರ್ತಿದ್ದ KSRTC ಬಸ್ಸಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಮೂವರ ದೇಹಗಳು ಛಿದ್ರ ಛಿದ್ರವಾಗಿದೆ.

ಸಾದಹಳ್ಳಿ ಗ್ರಾಮದ ಮನೋಜ್ ಸೇರಿ ಮತ್ತಿಬ್ಬರು ಸ್ನೇಹಿತರು ಮೃತಪಟ್ಟಿದ್ದಾರೆ. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇಬ್ಬರು ಹಿರಿಯ IPS ಅಧಿಕಾರಿಗಳ ವರ್ಗಾವಣೆ – ಅಲೋಕ್ ಕುಮಾರ್‌ಗೆ DGP ಪಟ್ಟ, ದಯಾನಂದ್‌ಗೆ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯೋಜನೆ!

Btv Kannada
Author: Btv Kannada

Read More