ಐಪಿಎಲ್‌ನಿಂದಲೇ ರುತುರಾಜ್ ಔಟ್ – ಚೆನ್ನೈ ತಂಡಕ್ಕೆ ಮತ್ತೆ MS ಧೋನಿ ಕ್ಯಾಪ್ಟನ್.. ದಿಢೀರ್ ಆಗಿದ್ದೇನು?

ಐಪಿಎಲ್​ ಸೀಸನ್​ 18ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದೆ. ಆರ್​ಸಿಬಿ ವಿರುದ್ಧವೂ ಸೋತು ಅವಮಾನಕ್ಕೆ ಒಳಗಾಗಿದ್ದ ಸಿಎಸ್​ಕೆಯಲ್ಲಿ ಸದ್ಯ ದೊಡ್ಡ ಬದಲಾವಣೆ ಮಾಡಲಾಗಿದೆ. ಮುಂದಿನ ಎಲ್ಲ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಪಂದ್ಯಗಳಿಗೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ವಹಿಸಲಿದ್ದಾರೆ.

ರುತುರಾಜ್ ಗಾಯಕ್ವಾಡ್ ಮೊಣಕೈಗೆ ಗಾಯವಾಗಿರುವ ಕಾರಣ ಅವರು ಇಡೀ ಐಪಿಎಲ್‌ ಟೂರ್ನಿಯಿಂದಲೇ ಹೊರಗುಳಿಯಲಿದ್ದಾರೆ. ರುತುರಾಜ್ ಗಾಯಕ್ವಾಡ್ ಅವರು ಇಂಜುರಿಗೆ ಒಳಗಾಗಿದ್ದರಿಂದ ತಂಡದ ನಾಯಕತ್ವವನ್ನು ಮತ್ತೆ ಎಂ.ಎಸ್​ ಧೋನಿಯ ಹೆಗಲೇರಿದೆ. ಚೆನ್ನೈ ತಂಡದ ಮುಂದಿನ ಎಲ್ಲ ಐಪಿಎಲ್​ ಪಂದ್ಯಗಳಿಗೆ ಎಂ.ಎಸ್​ ಧೋನಿಯೇ ಕ್ಯಾಪ್ಟನ್ ಆಗಿರಲಿದ್ದಾರೆ.

ಈ ಬಗ್ಗೆ ಮಾತನಾಡಿದ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಕೋಚ್ ಸ್ಟಿಫನ್ ಪ್ಲೇಮಿಂಗ್ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಏಪ್ರಿಲ್ 11 ಅಂದರೆ ಇಂದು ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಚೆನ್ನೈ ತಂಡ ತವರಲ್ಲೇ ಅಖಾಡಕ್ಕೆ ಇಳಿಯಲಿದೆ. ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿನ ಪಂದ್ಯದಲ್ಲಿ ಧೋನಿ ಮೊದಲಿನಂತೆ ವಿಕೆಟ್​ ಕೀಪರ್​ ಜೊತೆಗೆ ತಂಡದ ನಾಯಕತ್ವದ ಜವಾಬ್ದಾರಿ ಕೂಡ ನಿರ್ವಹಿಸಲಿದ್ದಾರೆ.

2025ರ ಐಪಿಎಲ್​ ಟೂರ್ನಿಯಲ್ಲಿ ರುತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ 5 ಪಂದ್ಯಗಳನ್ನು ಆಡಿರುವ ಚೆನ್ನೈ 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಇದಲ್ಲದೇ 17 ವರ್ಷಗಳ ಬಳಿಕ ತವರಿನಲ್ಲಿ ಚೆನ್ನೈ ತಂಡ ಆರ್​ಸಿಬಿ ವಿರುದ್ಧ ಸೋತಿರುವುದು ದೊಡ್ಡ ಮುಖಭಂಗವಾಗಿತ್ತು. ಪಾಯಿಂಟ್​ ಪಟ್ಟಿಯಲ್ಲಿ ಕೆಳಗಡೆಯಿಂದ 2 ಸ್ಥಾನ ಅಂದರೆ 4 ಮ್ಯಾಚ್ ಸೋತು 9ನೇ ಸ್ಥಾನದಲ್ಲಿರುವ ಚೆನ್ನೈ ತಂಡವನ್ನು ಕ್ಯಾಪ್ಟನ್​ ಆಗಿ ಎಂ.ಎಸ್​ ಧೋನಿ ಮತ್ತೆ ಮೇಲೆತ್ತುತ್ತಾರಾ ಎಂದು ಮುಂದಿನ ಪಂದ್ಯಗಳಿಂದ ತಿಳಿದು ಬರಲಿದೆ.

ಇದನ್ನೂ ಓದಿ : ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ತಹವ್ವೂರ್ ರಾಣಾ!

Btv Kannada
Author: Btv Kannada

Read More