ಸ್ಯಾಂಡಲ್​ವುಡ್​ನಲ್ಲಿ ಧನ್ವೀರ್ ಸೂಪರ್ ಹೀರೋ – ರಾಜ್ಯಾದ್ಯಂತ “ವಾಮನ”ನಿಗೆ ಭರ್ಜರಿ ರೆಸ್ಪಾನ್ಸ್.. ದಾಖಲೆಗಳೆಲ್ಲ ಉಡೀಸ್!

ಸ್ಯಾಂಡಲ್​ವುಡ್​ನ ಶೋಕ್ದಾರ್ ಧನ್ವೀರ್ ನಟನೆಯ ಬಹುನಿರೀಕ್ಷಿತ ಚಿತ್ರ “ವಾಮನ” ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದ್ದು, ಚಿತ್ರ ರಿಲೀಸ್ ಆದ ಮೊದಲ ದಿನವೇ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಧನ್ವೀರ್ ಮಾಸ್ ಹಾಗೂ ಕ್ಲಾಸ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದು, “ವಾಮನ”ನನ್ನು ಸಿನಿಪ್ರಿಯರು ಮೆಚ್ಚಿಕೊಂಡಿದ್ದಾರೆ. ಹಲವು ವಿಚಾರಗಳಲ್ಲಿ ವಾಮನ ಚಿತ್ರ ಸ್ಯಾಂಡಲ್​ವುಡ್​ನ ಹಳೆಯ ದಾಖಲೆಗಳನ್ನು ಪುಡಿ ಮಾಡಿದೆ.

ಸೊರಗಿ ಹೋಗಿದ್ದ ಸ್ಯಾಂಡಲ್​ವುಡ್​ಗೆ ವಾಮನ ಜೀವ ತುಂಬಿದೆ. ಈಗಾಗಲೇ ಸಿನಿಮಾದ ಹಾಡುಗಳು ಹಾಗೂ ಟೀಸರ್​ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು, ಪಕ್ಕಾ ಮಾಸ್ ಹಾಗೂ ಕ್ಲಾಸ್ ಅಂಶಗಳಿರುವ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ಚಿತ್ರದಲ್ಲಿ ನಾಯಕನ ಗುಣ ನೀರು ಇದ್ದಂತೆ. ರಾವಣ, ದುರ್ಯೋಧನ ಇಬ್ಬರನ್ನೂ ವಾಮನ ಆವರಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ನಾಲ್ಕು ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಮಾಸ್ ಆಡಿಯನ್ಸ್‌ಗೆ ಬೇಕಾದ ಅಂಶಗಳು ಕೂಡ ಚಿತ್ರದಲ್ಲಿವೆ. ಚಿತ್ರದ ಕಥೆಯಲ್ಲಿ ನಾಯಕ ನಟನ ಪಾತ್ರವನ್ನು ಒಂದಿಷ್ಟು ಜನ ಕಡೆಗಣಿಸುತ್ತಾರೆ. ಅವರಿಗೆ ನಾಯಕನ ಏಳಿಗೆ ಇಷ್ಟವಿರುವುದಿಲ್ಲ. ಆದರೆ ಎಲ್ಲರ ಊಹೆಗೂ ನಿಲುಕದ ಹಾಗೆ ನಾಯಕ ಬೆಳೆಯುತ್ತೇನೆ. ಕೇವಲ ಆ್ಯಕ್ಷನ್ ಸನ್ನಿವೇಶಗಳಿಂದ ನಾಯಕ ದೊಡ್ಡವನಾಗಿ ಕಾಣಿಸುವುದಿಲ್ಲ. ಬದಲಾಗಿ ಆತ ಏಕೆ ಹೊಡೆದಾಡುತ್ತಾನೆ ಎಂಬುದು ಮುಖ್ಯವಾಗಿದೆ. ಅದುವೇ ಕಥೆಯ ಸಾರವಾಗಿದೆ.

ನಟ ದರ್ಶನ್, ಚಿಕ್ಕಣ್ಣ ಸೇರಿದಂತೆ ಆಪ್ತರು ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ಆಗಮಿಸಿ ಧನ್ವೀರ್​ಗೆ ಸಾಥ್ ನೀಡಿದ್ದರು. ಇನ್ನು ಈ ಹಿಂದೆ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ದರ್ಶನ್ ವಿಜಯಲಕ್ಷ್ಮೀ ಬೆಂಬಲ ನೀಡಿದ್ದರು.

ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈ ನ್ವೆಂಟ್ ಲಾಂಛನದಡಿ ಚೇತನ್ ಗೌಡ “ವಾಮನ’ ಚಿತ್ರಕ್ಕೆ ಹಣ ಹೂಡಿದ್ದು, ಶಂಕರ್ ರಾಮನ್ ಅವರ ಮೊದಲ ನಿರ್ದೇಶನದ ಈ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಧನ್ವೀರ್​ಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ತಾರಾ, ಸಂಪತ್ ರಾಜ್, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಕಾಕ್ರೋಚ್ ಸುಧಿ ಚಿತ್ರದ ತಾರಾಗಣದಲ್ಲಿದ್ದಾರೆ. ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅಜನೀಶ್ ಲೋಕನಾಥ್ ಸಂಗೀತ, ಭೂಷಣ್ ನೃತ್ಯ ಸಂಯೋಜನೆ, ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ : ‘ವರ್ಣವೇದಂ’ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾದ ಖ್ಯಾತ ಗಾಯಕ ಸೋನು ನಿಗಂ!

Btv Kannada
Author: Btv Kannada

Read More