ಕಲಬುರಗಿಯಲ್ಲಿ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಬೈಕ್‌.. ಇಬ್ಬರು ಸಜೀವ ದಹನ!

ಕಲಬುರಗಿ : ಕಾರು- ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಧಗಧಗನೆ ಉರಿದು ಬೆಂಕಿಗೆ ಆಹುತಿಯಾಗಿ ಭಸ್ಮವಾಗಿದೆ. ಈ ದುರಂತದಲ್ಲಿ ಇಬ್ಬರು ಸಜೀವ ದಹನವಾದ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ ಕ್ರಾಸ್ ಬಳಿ ನಡೆದಿದೆ. ಆಕಾಶ್ ಧನವಂತ (19), ಸುಶೀಲ (28) ಮೃತ ದುರ್ದೈವಿಗಳು.

ಡಿಕ್ಕಿಯಾದ ತಕ್ಷಣ ಧಗಧಗನೆ ಹೊತ್ತಿ ಉರಿದ ಬೆಂಕಿಯಿಂದಾಗಿ ಆಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಶೀಲ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಡಿಕ್ಕಿಯ ನಂತರ ಬೈಕ್ ಸಂಪೂರ್ಣವಾಗಿ ಬೆಂಕಿಯಲ್ಲಿ ಸುಟ್ಟು ಹೋಗಿದೆ.

ಆಕಾಶ ಧನವಂತ (19)
     ಆಕಾಶ ಧನವಂತ (19)

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಅಪಘಾತದ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಶೀಲ (28)
                ಸುಶೀಲ (28)

ಇದನ್ನೂ ಓದಿ : ‘ಮೂನ್‌ವಾಕ್’ ಚಿತ್ರಕ್ಕೆ ಲಹರಿ ಮ್ಯೂಸಿಕ್ ಅಧಿಕೃತ ಸಂಗೀತ ಪಾರ್ಟ್​ನರ್‌ – ‌29 ವರ್ಷಗಳ ಬಳಿಕ ಒಂದಾದ ಎ.ಆರ್. ರೆಹಮಾನ್, ಪ್ರಭುದೇವ!

Btv Kannada
Author: Btv Kannada

Read More