ದೇವನಹಳ್ಳಿ : ಕೆಂಪೇಗೌಡ ಏರ್ಪೋರ್ಟ್ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿ ಹೆಚ್ಚಾಗಿದ್ದು, ಸೈಡ್ ಪಿಕಪ್ನಿಂದ ಬೇಸತ್ತ ಕೆಎಸ್ಟಿಡಿಸಿ ಚಾಲಕರು ಪ್ರತಿಭಟನೆಗೆ ಇಳಿದಿದ್ದಾರೆ. ಸೈಡ್ ಪಿಕಪ್ ಚಾಲಕರ ಹಾವಳಿಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಅರೈವಲ್ ಗೇಟ್ಗೆ ಬಂದು ಚಾಲಕರು ಸೈಡ್ ಪಿಕಪ್ ಮಾಡ್ತಿದ್ದು, ಏರ್ಪೋಟ್ ಟ್ಯಾಕ್ಸಿ ಅಂತ ಹೇಳಿಕೊಂಡು ಪ್ರಯಾಣಿಕರನ್ನು ಪಿಕ್ ಅಪ್ ಮಾಡ್ತಿದ್ದಾರೆ. ಇನ್ನು ಪಿಕ್ ಅಪ್ ಮಾಡೋವಾಗ ಒಂದು ದರ ಹೇಳಿ ಕರೆದುಕೊಂಡು ಹೋಗಿ ನಂತರ ದುಪ್ಪಟ್ಟು ದರ ಪಡೆಯುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹಾಗಾಗಿ ಏರ್ಪೋಟ್ ಟ್ಯಾಕ್ಸಿ ಹೆಸರಲ್ಲಿ ಪ್ರಯಾಣಿಕರಿಗೆ ಕಿರುಕುಳ ನೀಡಿ ನಮ್ಮ ಹೆಸರು ಹಾಳು ಮಾಡ್ತಿದ್ದಾರೆ ಎಂದು ಕೆಎಸ್ಟಿಡಿಸಿ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿಯೂ ಕೆಎಸ್ಟಿಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದು, ಇದೀಗ ಮತ್ತೆ ಏರ್ಪೋರ್ಟ್ನ ಟರ್ಮಿನಲ್ 1ರಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಸೈಡ್ ಪಿಕ್ ಅಪ್ ಬಗ್ಗೆ ಪೊಲೀಸರು ಮತ್ತು ಏರ್ಪೋಟ್ ಸಿಬ್ಬಂದಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಪ್ರವಾದಿ ಮಹಮ್ಮದ್ರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ – ಶಾಸಕ ಯತ್ನಾಳ್ ವಿರುದ್ದ FIR!
