ಪರಪ್ಪನ ಅಗ್ರಹಾರ ಕರ್ಮಕಾಂಡ ಹೊರಬೀಳ್ತಿದ್ದಂತೆ ಚೀಫ್ ಸೂಪರಿಂಟೆಂಡೆಂಟ್ ಕೆ. ಸುರೇಶ್ ವರ್ಗಾವಣೆ – ಕೆ.ಸುರೇಶ್ ಸ್ಥಳಕ್ಕೆ ಅಂಶು ಕುಮಾರ್ ನೇಮಕ!

ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕರ್ಮಕಾಂಡಗಳು ರಾಜ್ಯದಾದ್ಯಂತ ಸದ್ದು ಮಾಡುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಸರ್ಕಾರ, ಜೈಲಿನ ಮುಖ್ಯ ಅಧೀಕ್ಷಕ ಚೀಫ್ ಸೂಪರಿಂಟೆಂಡೆಂಟ್ ಕೆ. ಸುರೇಶ್ ಅವರನ್ನು ವರ್ಗಾವಣೆ ಮಾಡಿದೆ.

ಕೆ. ಸುರೇಶ್ ಅವರ ಸ್ಥಾನಕ್ಕೆ ಇದೀಗ ಅಂಶು ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಪರಪ್ಪನ ಅಗ್ರಹಾರ ಜೈಲಿನಿಂದ ಗೇಟ್ ಪಾಸ್ ಪಡೆದಿರುವ ಕೆ. ಸುರೇಶ್ ಅವರು ಮಂಡ್ಯ ಎಸ್ಪಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

 

ಇದನ್ನೂ ಓದಿ : ಅಮೋಘಸಿದ್ದ ದೇವಸ್ಥಾನದ ಪೂಜಾರಿ ಭೀಕರ ಹತ್ಯೆ – ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಬಲೆ!

Btv Kannada
Author: Btv Kannada

Read More