ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟಿ ಕೋಟಿ ಲೂಟಿ ಆರೋಪ – ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಅಕ್ರಮದ ಘಾಟು?

ಮಂಡ್ಯ : ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ‘ಕನ್ನಡ ನುಡಿ’ಯ ಹೆಸರಲ್ಲಿ ಕೋಟ್ಯಂತರ ರೂ. ಜೇಬಿಗಿಳಿಸಿದ್ದಾರೆ ಎನ್ನಲಾಗುತ್ತಿದ್ದು,
ಕೊನೆಗೂ ಮಂಡ್ಯ ಸಮ್ಮೇಳನದ ದೊಡ್ಡ ಹಗರಣ ಬಯಲಾಗಿದೆ.

3 ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಹು ದೊಡ್ಡ ಸ್ಕ್ಯಾಮ್​ ನಡೆದಿರುವ ಆರೋಪವಿದ್ದು, 17 ಸಮಿತಿಗಳ ಹೆಸರಲ್ಲಿ ಕೋಟಿ ಕೋಟಿ ವೆಚ್ಚದ ಲೆಕ್ಕ ಬಿಡುಗಡೆಯಾಗಿದೆ. ಮಂಡ್ಯ ಜಿಲ್ಲಾಡಳಿತ ಊಟ, ಪ್ರಚಾರಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದ್ದು, 3 ದಿನದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟಿ ಕೋಟಿ ವೆಚ್ಚದ ಲೆಕ್ಕ ಇದೆ. ಸಾಹಿತ್ಯ ಸಮ್ಮೇಳನದ ಊಟಕ್ಕೆ 6.74 ಕೋಟಿಗೂ ಹೆಚ್ಚು ಹಣ ಬಳಕೆ ಮಾಡಿದ್ದು, ಸಮ್ಮೇಳನಕ್ಕೆ ಬರುವವರ ವಸತಿ ವ್ಯವಸ್ಥೆಗೆ 1.97 ಕೋಟಿ ವಿನಿಯೋಗವಾಗಿದೆ.

ಇನ್ನು ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬರೋಬ್ಬರಿ 1.30 ಕೋಟಿ ವೆಚ್ಚವಾಗಿದ್ದು, ಜಿಲ್ಲಾಡಳಿತ ಮಾಧ್ಯಮ ಸಮನ್ವಯ ಸಮಿತಿಗೆ 1 ಕೋಟಿ ಬಳಸಿದೆ. ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರ 30 ಕೋಟಿ ಬಿಡುಗಡೆ ಮಾಡಿತ್ತು. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು, ಹಲವು ಸಂಘ ಸಂಸ್ಥೆಗಳಿಂದಲೂ ಹಣ ಸಂಗ್ರಹ ಮಾಡಿದ್ರು. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ 30 ಕೋಟಿಗೂ ಅಧಿಕ ಹಣ ಸಂಗ್ರಹ ಮಾಡಲಾಗಿತ್ತು. 30 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಬೇಕಾಬಿಟ್ಟಿ ಲೆಕ್ಕಪತ್ರ ರಿಲೀಸ್ ಮಾಡಿದ್ದಾರೆ.

ಇದೀಗ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ಅಕ್ರಮದ ಆರೋಪ ಕೇಳಿಬಂದಿದ್ದು, ಸಮ್ಮೇಳನದ ಹೆಸರಲ್ಲಿ ಮಹೇಶ್ ಜೋಶಿ ಲೂಟಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯ ಸಾಹಿತ್ಯ ಸಮ್ಮೇಳನದ  ಪ್ರತಿಯೊಂದು ಖರ್ಚು ವೆಚ್ಚವೂ ಮಹೇಶ್ ಜೋಶಿ ನೇತೃತ್ವದಲ್ಲಿ ನಡೆದಿದ್ದು, ಊಟದಿಂದ ಹಿಡಿದು ನಿದ್ರಿಸುವವರೆಗೂ ಮಹೇಶ್ ಜೋಶಿಗೆ ಮಾಹಿತಿ ಲಭ್ಯವಾಗಿದೆ. ಈಗ ಮಹೇಶ್ ಜೋಶಿ ವಿರುದ್ಧ ಕೋಟಿ ಕೋಟಿ ಅಕ್ರಮದ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಪತ್ನಿ ಕಿರುಕುಳ ಆರೋಪ : ಖಾಸಗಿ ಕಂಪನಿ ಉದ್ಯೋಗಿ ಆತ್ಮಹತ್ಯೆ!

Btv Kannada
Author: Btv Kannada

Read More

Read More