ಕುಡಿದ ಮತ್ತಿನಲ್ಲಿ ಪೊಲೀಸ್​​ ಅಧಿಕಾರಿ ಹುಚ್ಚಾಟ – ಬೇರೆಯವರ ಮನೆಯ ಬಾಗಿಲು, ಕಿಟಕಿ ಹೊಡೆದು ‘RSI’ಯ ಅಸಭ್ಯ ವರ್ತನೆ!

ಚಾಮರಾಜನಗರ : ಕುಡಿದ ಮತ್ತಿನಲ್ಲಿ ಪೊಲೀಸ್​​ ಅಧಿಕಾರಿ ಬೇರೆಯವರ ಮನೆಯ ಬಾಗಿಲು, ಕಿಟಕಿ ಹೊಡೆದು ಹುಚ್ಚಾಟ ಮೆರೆದಿರುವ ಘಟನೆ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ನಡೆದಿದೆ.

ಮೀಸಲು ಪಡೆಯ ಸಬ್ ಇನ್ಸ್​​ಪೆಕ್ಟರ್ ಬಾವು ಸಾಬ್​​ ಎಂಬಾತ ಈ ರೀತಿ ಅಸಭ್ಯವಾಗಿ ವರ್ತಿಸಿದ್ದಾನೆ. RSI ಬಾವು ಸಾಬ್ ಬೇರೆಯವರ ಮನೆಯ ಬಾಗಿಲು,ಕಿಟಕಿ ಹೊಡೆದು ಹಾಕಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿದ ಬಳಿಕ ಪೊಲೀಸರು RSI ಬಾವು ಸಾಬ್​​ರನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಸಾರ್ವಜನಿಕರ ಜೊತೆ ಸಜ್ಜನಿಕೆಯಿಂದ ವರ್ತಿಸಿ – ಪೊಲೀಸರಿಗೆ ಖಡಕ್​ ಸುತ್ತೋಲೆ ಹೊರಡಿಸಿದ DG-IGP ಡಾ.ಎಂ.ಎ ಸಲೀಂ!

Btv Kannada
Author: Btv Kannada

Read More