ನಕಲಿ ದಾಖಲೆ ಸೃಷ್ಟಿಸಿ 100ಕ್ಕೂ ಹೆಚ್ಚು ಪೊಲೀಸರಿಗೇ ಪಂಗನಾಮ – ಕೋಟಿ ಕೋಟಿ ವಂಚಿಸಿರೋ ‘ಪಾಯ್ಸನ್ ಪ್ರದೀಪ’ ಅರೆಸ್ಟ್!

ಬೆಂಗಳೂರು : ಪಾಪದ ಜನ್ರಿಗೆ, ದುಡ್ಡಿರೋ ಸಿರಿವಂತರಿಗೆ ವಂಚಕರು ವಂಚಿಸೋದನ್ನ ನೋಡಿರ್ತಿರಾ, ಯಾವತ್ತಾದ್ರೂ ಬೆಂಡೆತ್ತೋ ಪೊಲೀಸರಿಗೆ ಪಂಗನಾಮ ಇಡೋ ಖತರ್ನಾಕ್ ವಂಚನನ್ನ ನೋಡಿದ್ದೀರಾ? ಯೆಸ್​.. ಸಿಲಿಕಾನ್​ ಸಿಟಿ ಬೆಂಗಳೂರಲ್ಲಿ ಸರಿಸುಮಾರು 100 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪ್ರಾಪರ್ಟಿ ಹೆಸರಲ್ಲಿ ಪಂಗನಾಮ ಹಾಕಿದ ಮಹಾ ವಂಚಕನ ಕಥೆಯಿದು.

ಹೌದು.. ಪ್ರದೀಪ @ಪಾಯ್ಸನ್ ಪ್ರದೀಪನೇ ಆ ಪ್ರಳಯಾಂತಕ. ಈತ ಸರಿಸುಮಾರು 100 ಮಂದಿ ಪೊಲೀಸ್ ಅಧಿಕಾರಿಗಳಿಗೆ ಪ್ರಾಪರ್ಟಿ ಹೆಸರಲ್ಲಿ ಕೋಟಿ ಕೋಟಿ ಹಣ ವಂಚಿಸಿದ್ದಾನೆ. ವಿದ್ಯಾರಣ್ಯಪುರ, ಯಲಹಂಕ, ಯಲಹಂಕ ನ್ಯೂಟೌನ್ ಸೇರಿದಂತೆ ಹಲವು ಪೊಲೀಸ್ ಠಾಣೆಯ ಪಿಸಿಯಿಂದ ಹಿಡಿದು ಎಸಿಪಿವರೆಗೂ ಎಲ್ಲರಿಗೂ ಮೂರು ನಾಮ ಹಾಕಿದ್ದಾನೆ.

ಪಾಯ್ಸನ್ ಪ್ರದೀಪ ನಕಲಿ ಭೂದಾಖಲೆಗಳನ್ನ ಸೃಷ್ಟಿಸಿ ಪೊಲೀಸ್ ಅಧಿಕಾರಿಗಳಿಗೆ ಮೋಸ ಮಾಡ್ತಿದ್ದ. ತನ್ನದೇ ಹೆಸರಲ್ಲಿ ಪ್ರಾಪರ್ಟಿ ಇದೆ ಅಂತ ಅಶೋಕ್ ಕುಮಾರ್ ಎಂಬ ಪೊಲೀಸ್ ಅಧಿಕಾರಿಗೆ ವಂಚಿಸಿದ್ದ ಪ್ರದೀಪ, ರೌಡಿಶೀಟರ್ ಆಟೋರಾಮನ ಪಕ್ಕಾ ಶಿಷ್ಯನಾಗಿದ್ದ.

ಈ ಹಿಂದೆ ಆಟೋರಾಮನ ಜೊತೆ ಪಾಯ್ಸನ್ ಪ್ರದೀಪ ಕೂಡ ಭೂ ಮಾಫಿಯಾ ಕೇಸಲ್ಲಿ ತಗಲ್ಲಾಕ್ಕೊಂಡಿದ್ದ. ಜಾಮೀನಿನ ಮೇಲೆ ಎಷ್ಟೇ ಬಾರಿ ಬಂದ್ರೂ ಪ್ರದೀಪ ಮಾಡ್ತಿದ್ದುದು ಮಾತ್ರ ಯಾರದ್ದೋ ಪ್ರಾಪರ್ಟಿಯನ್ನ ಒಳಗಾಕ್ಕೊಂಡು ಇನ್ಯಾರಿಗೋ ನೀಡುವಂತಹ ವಂಚನೆ ಕೆಲ್ಸ. ಇತ್ತೀಚೆಗೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಜಾಗ ತೋರಿಸಿ ಕೋಟ್ಯಾಂತರ ರೂಪಾಯಿ ಜೇಬಿಗಿಳಿಸಿಕೊಂಡಿದ್ದ ಪ್ರದೀಪ್ ವಿರುದ್ದ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ಇದೀಗ ಮಹಾ ವಂಚಕ ಪಾಯ್ಸನ್ ಪ್ರದೀಪನನ್ನ ಬಂಧಿಸಲಾಗಿದೆ.

ಇದನ್ನೂ ಓದಿ : ಹೈನುಗಾರರ ಪ್ರತಿಭಟನೆಗೆ ಮಣಿದ KMF – ಹಾಲಿನ ದರ ಪರಿಷ್ಕರಣೆ ಕೈಬಿಟ್ಟ ಹಾವೇರಿ ಒಕ್ಕೂಟ!

Btv Kannada
Author: Btv Kannada

Read More

Read More