4 ಸಿಟಿ ಇನ್ಸ್​ಪೆಕ್ಟರ್​​ಗಳ ವರ್ಗಾವಣೆಗೆ ದಿಢೀರ್ ಬ್ರೇಕ್​​ – ಸಿಎಂ, ಡಿಸಿಎಂ, ಗೃಹ ಸಚಿವರ ಅಧೀನದಲ್ಲೇ ಟ್ರಾನ್ಸ್​ಫರ್​ಗೆ ‘ಹೈ’ ಸಂದೇಶ!

ಬೆಂಗಳೂರು : ನಿನ್ನೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಇನ್ಪೆಕ್ಟರ್ ಹಾಗೂ 27 ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದರೆ ಇದೀಗ 4 ಪ್ರಮುಖ ಸಿಟಿಗಳ ಪೊಲೀಸ್​​ ಇನ್ಸ್​​ಪೆಕ್ಟರ್​​​​​​​ಗಳ ವರ್ಗಾವಣೆಗೆ ಸರ್ಕಾರ ಬ್ರೇಕ್ ಹಾಕಿದೆ.

ಬೆಂಗಳೂರು ಸಿಟಿ, ಮೈಸೂರು ಸಿಟಿ, ಬೆಳಗಾವಿ ಸಿಟಿ, ಮಂಗಳೂರು ಸಿಟಿ ವರ್ಗಾವಣೆಗೆ ಸರ್ಕಾರ ತಡೆ ನೀಡಿದ್ದು, ಸಿಎಂ, ಡಿಸಿಎಂ, ಗೃಹ ಸಚಿವ ನೇತೃತ್ವದಲ್ಲಿ ಇನ್ಸ್​​ಪೆಕ್ಟರ್​​ಗಳ ವರ್ಗಾವಣೆ ನಡೆಯಬೇಕೆಂಬ ಸಂದೇಶ ರವಾನಿಸಲಾಗಿದೆ. ಈ ಮೂವರ ಕಣ್ಗಾವಲಿನಲ್ಲೇ ವರ್ಗಾವಣೆ ನಡೆಯಬೇಕೆಂಬ ಹೈಕಮಾಂಡ್ ಸಂದೇಶ ನೀಡಿದೆ ಎನ್ನಲಾಗುತ್ತಿದೆ.

ಮೊನ್ನೆ ಬೆಂಗಳೂರಿಗೆ ರಾಜ್ಯ ಉಸ್ತುವಾರಿ ಬಂದಾಗಲೂ ವರ್ಗಾವಣೆ ಫೈಟ್ ವಿಚಾರ ಪ್ರಸ್ತಾಪವಾಗಿತ್ತು. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂಗೆ ಖಡಕ್ ಸಂದೇಶ ರವಾನಿಸಿದ್ಯಾ ಎಂಬ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ : ಮಾರ್ಕ್ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್ – ‘ಸೈಕ್ ಸೈತಾನ್’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕಿಚ್ಚ!

Btv Kannada
Author: Btv Kannada

Read More