ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್​ಗಳ ಮೇಲೆ ಹಲ್ಲೆ – ಕೇಸ್ ದಾಖಲು!

ಹಾವೇರಿ : ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ರಿಕವರಿ ಏಜೆಂಟ್​ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ನಡೆದಿದೆ.

ರಿಕವರಿ ಏಜೆಂಟ್ ಗೌರಮ್ಮ ಮತ್ತು ಗಣೇಶ್ ಎಂಬುವವರನ್ನು ಸಾಲ‌ ಮರುಪಾವತಿ ಮಾಡ್ತೀನಿ ಬಾ ಅಂತ ಕರೆಸಿ​ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಸುಲೇಮಾನ, ನೂರಜಾನ್ ಸೇರಿ ಒಟ್ಟು ಐದು ಜನರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.

A2 ಆರೋಪಿ ನೂರಜಾನ್ ಧರ್ಮಸ್ಥಳ ಸಂಘದಲ್ಲಿ 3 ಲಕ್ಷ ಸಾಲ ಪಡೆದಿದ್ದ. ಆರಂಭದಲ್ಲಿ 1 ಲಕ್ಷ 6 ಸಾವಿರ ರೂಪಾಯಿ ಕಂತುಗಳನ್ನ ಕಟ್ಟಿದ್ದ. ಇನ್ನುಳಿದ 1 ಲಕ್ಷ 94 ಸಾವಿರ ರೂಪಾಯಿ ಹಣವನ್ನ ಕಟ್ಟದೆ ಸಂಘಕ್ಕೆ ವಂಚನೆ ಮಾಡಿದ್ದ. ಆದರೆ ಏಕಾಏಕಿ ಸಾಲ ಕಟ್ಟುವುದಾಗಿ ಆರೋಪಿ, ಏಜೆಂಟ್​​ಗಳನ್ನು ಮನೆಗೆ ಕರೆಸಿದ್ದ. ಬಳಿಕ ಮನೆಯ ಎರಡೂ ಬದಿಯಲ್ಲಿ ಬಾಗಿಲು ಹಾಕಿ ಕುರ್ಚಿಯಿಂದ ಹಲ್ಲೆ ಮಾಡಿದ್ದಾರೆ.

ಗಾಯಾಳುಗಳಿಗೆ ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಸ್ಯಾಂಡಲ್​ವುಡ್ ನಟಿಗೆ ಸಿನಿಮಾ ಹೆಸರಲ್ಲಿ ಲೈಂಗಿಕ‌ ಕಿರುಕುಳ ಆರೋಪ – ನಿರ್ಮಾಪಕ ಹೇಮಂತ್‌ ಅರೆಸ್ಟ್‌!

Btv Kannada
Author: Btv Kannada

Read More