ಬೆಂಗಳೂರು : ಕಂದಾಯ ಸಚಿವ ಕೃಷ್ಣ ಬೈರೇಗೌಡರೇ.. ರೆವಿನ್ಯೂ ಇನ್ಸ್ಪೆಕ್ಟರ್ ಮಾಡಿರುವ ಅತೀ ದೊಡ್ಡ ಭೂಹಗರಣ ಬಟಾಬಯಲಾಗಿದೆ. ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಬಾಗಲೂರು ಗ್ರಾಮವನ್ನೇ ಭಾಗ ಭಾಗ ಮಾಡಿ ಮಾರಿದ್ದಾರೆ. ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಕೋಟ್ಯಂತರ ಮೌಲ್ಯದ ಭೂಹಗರಣ ನಡೆಸಿದ್ದು, ಬೆಂಗಳೂರು ಏರ್ಪೋರ್ಟ್ ಬಳಿಯ ಭೂಮಿಗೆ ಕನ್ನ ಹಾಕಿದ್ದಾರೆ. ಸರ್ಕಾರಿ ಜಮೀನು, ಕೆರೆಗಳ ಮಾರಾಟದಲ್ಲೂ RI ಸಂದೀಪ್ ಸಿಂಗ್ ಕೈವಾಡವಿರುವುದು ಬೆಳಕಿಗೆ ಬಂದಿದೆ.

ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಭೂ ಮಾಫಿಯಾ ಜೊತೆ ಶಾಮೀಲಾಗಿದ್ದು, ಬಾಗಲೂರು, ಸಿಂಗಹಳ್ಳಿಯಲ್ಲಿ ನಕಲಿ ನೋಂದಣಿ ಮಾಡಿಸಿ ಸರ್ಕಾರಿ ಭೂಮಿ ಮಾರಾಟ ದಂಧೆ ನಡೆಸಿದ್ದಾನೆ. ನೂರಾರು ಕೋಟಿ ಅಕ್ರಮದಲ್ಲಿ ಭಾಗಿಯಾದ RI ಸಂದೀಪ್ ಸಿಂಗ್ 50 ಲಕ್ಷದ ರೋಲ್ಯಾಕ್ಸ್ ವಾಚ್, ಫೈವ್ ಸ್ಟಾರ್ ಹೊಟೇಲ್ನಲ್ಲೇ ವಾಸ್ತವ್ಯ ಹುಡುತ್ತಿದ್ದು, ಅಕ್ರಮವಾಗಿ ನೂರಾರು ಕೋಟಿ ಒಡೆಯನಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾನೆ.

ಅಷ್ಟೇ ಅಲ್ಲದೇ ಬಿಲ್ಡರ್ಗಳು, ದೊಡ್ಡ ಭೂಮಾಲಕರೇ ಈ ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ನ ಸಹಚರರಾಗಿದ್ದಾರೆ. ಸ್ಕ್ವಾರ್ ಫೀಟ್ಗೆ 5-6 ಸಾವಿರ ಇರೋ ಊರಿಗೆ ಮಾತ್ರ RI ಆಗಿ ನೇಮಕವಾಗುವ ಸಂದೀಪ್ ಸಿಂಗ್, ತಹಶೀಲ್ದಾರರು, ಎಸಿಗಳನ್ನು ಕ್ಯಾರೇ ಮಾಡುವುದಿಲ್ಲ. RI ಸಂದೀಪ್ ಸಿಂಗ್ ಕೊಟ್ಟ ಫೈಲ್ಗೆ ತಹಶೀಲ್ದಾರ್ ಕಮಕ್ ಕಿಮಕ್ ಅನ್ದೇ ಸಹಿ ಹಾಕಬೇಕು. RI ಸಂದೀಪ್ ಸಿಂಗ್ ಸಿಂಗಹಳ್ಳಿಯ 13 ಎಕರೆ ಜಮೀನನ್ನು ತನ್ನ ಗೆಳೆಯ ಬಿಲ್ಡರ್ಗೆ ರಿಜಿಸ್ಟರ್ ಮಾಡಿಸಿದ್ದು, ಬರೋಬ್ಬರಿ 500 ಕೋಟಿ ಮೌಲ್ಯದ ಸಿಂಗಹಳ್ಳಿ ಜಮೀನು ಸಂದೀಪ್ ಸಿಂಗ್ ಸಹಚರ ಬಿಲ್ಡರ್ ಪಾಲಾಗಿದೆ.

ಈ ಬಗ್ಗೆ ಸಿಂಗಹಳ್ಳಿಯ ಗ್ರಾಮಸ್ಥರು ದೂರು ನೀಡಿದರೂ ಬಾಗಲೂರು RI ಸಂದೀಪ್ ಸಿಂಗ್ ಮೇಲೆ ಈವರೆಗೆ ಕ್ರಮವಿಲ್ಲ. ಯಾವ ಭ್ರಷ್ಟ ಅಧಿಕಾರಿಯನ್ನೂ ಬಿಡದ IAS ಆದಿತ್ಯ ಬಿಸ್ವಾಸ್ ಅವರೇ, ಈತನ ಮೇಲೆ ಎಫ್ಐಆರ್ ಮಾಡಿ, ಅರೆಸ್ಟ್ ಮಾಡಿ. ಬಾಗಲೂರು ರೆವೆನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ಹಗರಣಗಳ ತನಿಖೆಗೆ SIT ರಚಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. RI ಸಂದೀಪ್ ಸಿಂಗ್ ವಾಟ್ಸಪ್ ಕಾಲ್ ಡಿಟೇಲ್ಸ್ ತೆಗೆದ್ರೆ ಹಗರಣಗಳ ಸರಮಾಲೆಯೇ ಹೊರಬರುತ್ತೆ. ಸಂದೀಪ್ ಸಿಂಗ್ ಮೊಬೈಲ್ ಸಿಡಿಆರ್ ತೆಗೆದ್ರೆ ಬೆಂಗಳೂರಿನ ಭೂಹಗರಣ ಬಯಲಿಗೆ ಬರಲಿದೆ. ಆರ್ಐ ಕಚೇರಿ, ವಾಸ್ತವ್ಯ ಹೂಡಿದ ಪೈವ್ ಸ್ಟಾರ್ ಹೊಟೇಲ್ಗಳ ಸಿಸಿಟಿವಿ ಪರಿಶೀಲಿಸಿ ಎಂದು IAS ಬಿಸ್ವಾಸ್ ಅವರಿಗೆ ಮನವಿ ಮಾಡಿದ್ದಾರೆ.

ಇನ್ನು, ಹಗರಣ ಹೊರ ಬರುತ್ತಿದ್ದಂತೆ ಬಾಗಲೂರು RI ಸಂದೀಪ್ ಸಿಂಗ್ ಸ್ವಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತಿಯಾಗಿ ಭೂಹಗರಣದ ಕಪ್ಪು ಹಣವನ್ನು ಬ್ಯುಸಿನೆಸ್ಗೆ ಹೂಡಿಕೆ ಮಾಡುವ ಪ್ಲ್ಯಾನ್ ಸಂದೀಪ್ ಮಾಡಿದ್ದಾರೆ. ಹೀಗಾಗಿ ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ ತನಿಖೆಯಾದ್ರೆ ಸಾವಿರಾರು ಎಕರೆ ಭೂ ಹಗರಣ ಬಯಲಿಗೆ ಬರಲಿದೆ. EDಯಲ್ಲೂ ಬಾಗಲೂರು ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ. ಅಷ್ಟೇ ಅಲ್ಲದೇ, ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ ತರಲು ಸಂದೀಪ್ ಸಿಂಗ್ ಟೀಮ್ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿದೆ.

ಸಿಟಿ ಸಿವಿಲ್ ಕೋರ್ಟ್ಗೆ ಸಲ್ಲಿಸಿದ ಸೇಲ್ ಡೀಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಸಿಎಚ್ 26 ಜಡ್ಜ್, ಸಂದೀಪ್ & ಟೀಮ್ ಪರ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮಾನ್ಯ ನ್ಯಾಯಾಲಯವೇ ಸೇಲ್ ಡೀಡ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ರೂ RI ಸಂದೀಪ್ ಸಿಂಗ್ ಮೇಲೆ ಕ್ರಮಕ್ಕೆ ಮೀನಾಮೇಷ ಯಾಕೆ? ಭೂ ಮಾಫಿಯಾದ 13 ಜನರೊಂದಿಗೆ ಸೇರಿಕೊಂಡು ಬಾಗಲೂರು RI ಸಂದೀಪ್ ಸಿಂಗ್ ಕಳ್ಳಾಟವಾಡಿದ್ದು, ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಕೆರೆ ಜಾಗ ಅಕ್ರಮವಾಗಿ ಮಾರಾಟ ಮಾಡಿದ್ದಾನೆ. ಹೀಗಾಗಿ ಕಂದಾಯ ಅಧಿಕಾರಿಗಳೇ, ಬಾಗಲೂರು ರೆವಿನ್ಯೂ ಇನ್ಸ್ಪೆಕ್ಟರ್ ಸಂದೀಪ್ ಸಿಂಗ್ನ್ನು ಕೂಡಲೇ ಅರೆಸ್ಟ್ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.







ಇದನ್ನೂ ಓದಿ : ‘ಅಧಿರ’ ಯುಗ ಆರಂಭ.. ಮತ್ತೊಮ್ಮೆ ಆರ್ಕೆಡಿ ಸ್ಟುಡಿಯೋಸ್ ಜೊತೆ ಕೈಜೋಡಿಸಿದ ನಿರ್ದೇಶಕ ಪ್ರಶಾಂತ್ ವರ್ಮಾ!







