ಬೆಂಗಳೂರು : ಕುಡಿದ ಅಮಲಲ್ಲಿ ಫಾಸ್ಟ್ಫುಡ್ ಮಾಲೀಕನಿಗೆ ಪುಂಡನೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಆವಾಜ್ ಹಾಕಿದ ಘಟನೆ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಮಂದಿರದ ಬಳಿ ಇರುವ ಅನ್ನಪೂರ್ಣೇಶ್ವರಿ ಫಾಸ್ಟ್ಫುಡ್ಗೆ ಎಂಟ್ರಿ ಕೊಟ್ಟ ಪುಂಡ, ಕುಡಿದ ಮತ್ತಲ್ಲಿ ಮೊಬೈಲ್ ಹಿಡಿದು ಮಾಲೀಕರಿಗೆ ಅವಾಜ್ ಹಾಕಿದ್ದಾನೆ. ಆತನ ಒಂದಿಬ್ಬರು ಸಹಚರರನ್ನ ಕೂಡ ಕರೆತಂದಿದ್ದ ಪುಂಡ, ಸುಖಾಸುಮ್ಮನೆ ಗಲಾಟೆ ತೆಗೆದು ಅವಾಚ್ಯ ಶಬ್ಧದಿಂದ ಫಾಸ್ಟ್ಫುಡ್ ಮಾಲೀಕರಿಗೆ ನಿಂದಿಸಿದ್ದಾನೆ.
ಅಷ್ಟೇ ಅಲ್ಲದೆ, ಹೋಟೆಲ್ ಸಿಬ್ಬಂದಿಯ ಜೊತೆ ಹೊಡೆದಾಟಕ್ಕೂ ಪುಂಡ ಮುಂದಾಗಿದ್ದ. ಸದ್ಯ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಗೆ ಹೋಟೆಲ್ ಸಿಬ್ಬಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸದ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ದೇಶದ ಜನತೆಗೆ ಬಂಪರ್ ಕೊಡುಗೆ – ಇಂದಿನಿಂದ GST 2.0 ಜಾರಿ.. ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?







