ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಗೆ 31 ಶಿಕ್ಷಕರು ಆಯ್ಕೆ – ಇಂದು ಸಿಎಂ ಸಿದ್ದರಾಮಯ್ಯರಿಂದ ಪ್ರಶಸ್ತಿ ಪ್ರದಾನ!

ಬೆಂಗಳೂರು : ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು ನೀಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಯನ್ನು ಗುರುವಾರ ಪ್ರಕಟಿಸಿದ್ದು, 31 ಶಿಕ್ಷಕರನ್ನು ಆಯ್ಕೆ ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇಂದು ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿರುವ ಶಿಕ್ಷಕರಿಗೆ ‘ಉತ್ತಮ ಶಿಕ್ಷಕ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

ಈ ಬಾರಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು ‘ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ 25,000 ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಗುತ್ತದೆ. ಇನ್ನೂ ‘ಉತ್ತಮ ಶಿಕ್ಷಕ ಪ್ರಶಸ್ತಿ’ಯಲ್ಲಿನ ಇಬ್ಬರು ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಪ್ರಶಸ್ತಿ ವಿಜೇತರು : ಪ್ರಾಥಮಿಕ ಶಾಲೆ ವಿಭಾಗ : ಚಂದ್ರ ನಾರಾಯಣ ಬಿಲ್ಲವ (ಶಿರೂರು), ಎಸ್.ಬಿ.ಶಿವಣ್ಣ (ತುರುವೇಕೆರೆ), ಎಂ.ಹರೀಶ್ ಕುಮಾರ್ (ಮಧುಗಿರಿ), ಎಚ್. ಆರ್.ಗೋವಿಂದರಾಜು (ಬೆಂ.ಉತ್ತರ), ಎ.ಜಗದೀಶ ಶೆಟ್ಟಿ (ಮಂಗಳೂರು ದಕ್ಷಿಣ), ಟಿ.ರಾಮಚಂದ್ರಪ್ಪ (ಚನ್ನಪಟ್ಟಣ), ಮಹಾಂತೇಶ ಮೇಟಿ (ಬಳ್ಳಾರಿ), ಎಸ್.ಜಿ. ಮಡಿವಾಳಮ್ಮ (ಮುದ್ದೇಬಿಹಾಳ), ವೈ.ಇ.ಲೋಹಿತೇಶ (ಮೈಸೂರು), ಜಿ.ಮಂಜುನಾಥ (ಶ್ರೀನಿವಾಸಪುರ), ಎಚ್.ಕೆ.ಕುಮಾರ (ಗೋಣಿಕೊಪ್ಪಲು), ಬಸವರಾಜ ಗಿರೆಪ್ಪ (ಚಿಕ್ಕೋಡಿ), ಹುಚ್ಚಪ್ಪ ಬಿ.ಕೊರವರ (ಹುಬ್ಬಳ್ಳಿ), ಎಚ್. ಮಂಜುನಾಥ (ಆನೇಕಲ್), ಕೆ.ಎಲ್.ಪುರುಷೋತ್ತಮ (ಆಲೂರು), ಎಸ್.ಎನ್.ಸಂತಾನ ರಾಮನ್ (ಪಾಂಡವಪುರ), ಪರಮೇಶ್ವರ ರಾಮ ನಾಯ್ಕ (ಹೊನ್ನಾವರ), ಎನ್.ಪ್ರೇಮಾವತಿ (ಚಿಕ್ಕಬಳ್ಳಾಪುರ), ಲಂಬಾಣಿ ರೆಡ್ಡಿ ನಾಯ್ಕ (ಹಗರಿಬೊಮ್ಮನಹಳ್ಳಿ), ಹೊನ್ನ ಹನುಮಯ್ಯ (ನೆಲಮಂಗಲ).

ಪ್ರೌಢಶಾಲೆ ವಿಭಾಗ : ಹಣುಮಂತರಾಯ ಸೋಮಾಪುರ (ಶಹಪೂರ), ಗೋಪಾಲ.ಕೆ.ನಾಯ್ಕ (ಶಿರಸಿ), ಸತೀಶ್ ಭಟ್ (ಪುತ್ತೂರು), ಸಿ.ಜಿ.ಯಶವಂತ ಕುಮಾರ (ಕಡೂರು), ರಾಜಶೇಖರ ಕಲ್ಯಾಣಪ್ಪ (ಬೆಳಗಾವಿ), ಶ್ರೀಧರ ಶೇಟ್ (ಉತ್ತರ ಕನ್ನಡ), ರವೀಂದ್ರ ಶಿಂದೆ (ಬೆಳಗಾವಿ), ನೀಲಕಂಠ ಗೋವಿಂದರಡ್ಡಿ (ಧಾರವಾಡ), ಆರ್. ಶಿವಶಂಕರ್ (ಹೊಸದುರ್ಗ), ವಿ.ಡಿ. ಶಿವಣ್ಣ (ಮಧುಗರಿ), ಶಿವನ ನಾಯಕ(ಕೂಡ್ಲಿಗಿ).

ಪಿಯು ವಿಭಾಗದ ಪ್ರಶಸ್ತಿ ಪುರಸ್ಕೃತರ ಪಟ್ಟಿ : ಉತ್ತಮ ಪ್ರಾಂಶುಪಾಲರು : ಆನಂದ ಶಿವಪ್ಪಾ (ಚಿಕ್ಕೋಡಿ), ಹಾಗೂ ಎಚ್.ಕೆ. ಕೃಷ್ಣಯ್ಯ (ಮೈಸೂರು).

ಉತ್ತಮ ಉಪನ್ಯಾಸಕರು : ಆರ್.ದೇವರಾಜು (ಬೆಂಗಳೂರು), ಡಾ.ಜಿ. ಸಫ್ರರಾಜ್​​ (ಸಾಗರ), ಡಾ.ಕೆ. ಲಿಂಗಾನಂದ ಗವಿಮತ್ (ಜಮಖಂಡಿ), ಜ್ಯೋತಿ (ಬೆಳಗಾವಿ), ಬಸವರಾಜ ಜಲವಾಡಿ (ಬಸವನಬಾಗೇವಾಡಿ), ಡಾ.ಕೆ.ಲೋಕೇಶ್ (ತಿಪಟೂರು), ವಿಜಯಲಕ್ಷ್ಮೀಪೆಟ್ಟೂರು (ಬಾಗಲಕೋಟೆ), ಸಿ.ವಿ. ವೆಂಕಟಾಚಲ (ಶಿರಾ)

ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿ : ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವೀರರಾಘವನಪಾಳ್ಯದ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಚಿತ್ರದುರ್ಗ ಹೊಸದುರ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಾಜಿ ಶಿಕ್ಷಣಸಚಿವ ದಿವಂಗತ ಎಚ್.ಜಿ.ಗೋವಿಂದೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಗೆ 25 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ : ಅಕ್ರಮ ಬೆಟ್ಟಿಂಗ್‌ ಪ್ರಕರಣ – ಶಾಸಕ ವೀರೇಂದ್ರ ಪಪ್ಪಿ ಮತ್ತೆ 4 ದಿನ ಇಡಿ ಕಸ್ಟಡಿಗೆ!

 

 

 

Btv Kannada
Author: Btv Kannada

Read More