ಸಚಿವ ಮಹದೇವಪ್ಪ ಹೆಸರಿನಲ್ಲಿ 27 ಲಕ್ಷ ರೂ. ವಂಚನೆ ಎಸಗಿದ ಐನಾತಿ ಮಹಿಳೆ.. ನ್ಯಾಯಕ್ಕಾಗಿ ಪೋಲೀಸರ ಮೊರೆ ಹೋದ ಗ್ರಾಮಸ್ಥರು!

ಮೈಸೂರು : ಸಚಿವ ಹೆಚ್.ಸಿ ಮಹದೇವಪ್ಪನವರ ಹೆಸರಿನಲ್ಲಿ ನೂರಾರು ಮಹಿಳೆಯರು, ಯುವಕರಿಗೆ ಐನಾತಿ ಮಹಿಳೆಯೋರ್ವಳು ವಂಚನೆ ಎಸಗಿರುವ ಘಟನೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ನಡೆದಿದೆ.

ಕೊಳತ್ತೂರು ಗ್ರಾಮದ ಜ್ಯೋತಿ ಎಂಬ ಮಹಿಳೆ ನೂರಾರು ಮಹಿಳೆಯರು, ಯುವಕರಿಂದ ಬರೋಬ್ಬರಿ 27 ಲಕ್ಷ ರೂ. ಹಣ ಪೀಕಿದ್ದು, ಸರ್ಕಾರದ ವಿವಿಧ ಯೋಜನೆಗಳ ಸವಲತ್ತು, ಸಾಲ ಕೊಡಿಸುವುದಾಗಿ ಹಣ ಪಡೆದು ಪರಾರಿಯಾಗಿದ್ದಾಳೆ.

ಇದೀಗ ವಂಚನೆಗೊಳಗಾದ ಗ್ರಾಮಸ್ಥರು ತಲಕಾಡು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು, ನ್ಯಾಯ ಕೊಡಿಸುವಂತೆ ಪೋಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್​ನಲ್ಲಿ KGF ಬಾಬುಗೆ ಸಂಕಷ್ಟ.. ಯಾವುದೇ ಕ್ಷಣ ಅರೆಸ್ಟ್​ ಸಾಧ್ಯತೆ!

Btv Kannada
Author: Btv Kannada

Read More