ಓವರ್ ಟೇಕ್‌ ಮಾಡಲು ಹೋಗಿ KSRTC ಬಸ್​ಗೆ ಡಿಕ್ಕಿ ಹೊಡೆದ ಕಾರು – ಚಾಲಕ ಸ್ಥಳದಲ್ಲೇ ಸಾವು!

ಬಾಗಲಕೋಟೆ : ಓವರ್ ಟೇಕ್‌ ಮಾಡಲು ಹೋಗಿ ಇನ್ನೋವಾ ಕಾರೊಂದು KSRTC ಬಸ್​ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾದಾಮಿ ತಾಲ್ಲೂಕಿನ ಹೂಲಗೇರಿ ಗ್ರಾಮದ ಸಮೀಪದ ಹುಬ್ಬಳ್ಳಿ – ವಿಜಯಪುರ ಹೆದ್ದಾರಿಯಲ್ಲಿ ನಡೆದಿದೆ.

ಸಾಗರ ತೆಕ್ಕೆನ್ನವರ್ ಮೃತ ಕಾರು ಚಾಲಕ. ಸಾಗರ ತೆಕ್ಕೆನ್ನವರ್​ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿದ್ದರು ಎನ್ನಲಾಗ್ತಿದೆ.

ಅಪಘಾತದ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, KSRTC ಬಸ್ ಡ್ರೈವರ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಅಕ್ರಮ ಬೆಟ್ಟಿಂಗ್ ಪ್ರಕರಣ – ಚಿತ್ರದುರ್ಗದ ಕಾಂಗ್ರೆಸ್​ MLA ಕೆ.ಸಿ ವೀರೇಂದ್ರ 5 ದಿನ ED ಕಸ್ಟಡಿಗೆ!

Btv Kannada
Author: Btv Kannada

Read More