ಪವಿತ್ರಾ ಗೌಡ ಅರೆಸ್ಟ್ ಬೆನ್ನಲ್ಲೇ ಮಗಳ ಪೋಸ್ಟ್ ವೈರಲ್ – ಖುಷಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಏನಿದೆ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯ ಜಾಮೀನನ್ನು ಸುಪ್ರೀಂ ಕೋರ್ಟ್​ ರದ್ದು ಮಾಡಿದ ಬೆನ್ನಲ್ಲೇ ಅವರನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ ಉಳಿದ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಪವಿತ್ರಾ ಗೌಡ ಅವರ ಮಗಳು ಖುಷಿ ಗೌಡ ಹಂಚಿಕೊಂಡಿರುವ ಪೋಸ್ಟ್‌ ಒಂದು ವೈರಲ್‌ ಆಗಿದೆ.

79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಪವಿತ್ರಾ ಗೌಡ ಅವರ ಪುತ್ರಿ ಖುಷಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. “ಸ್ವಾತಂತ್ರ್ಯ ದಿನಾಚರಣೆಯಂದು, ಬ್ರಿಟಿಷರ ಆಳ್ವಿಕೆಯಿಂದ ನಮಗೆ ಖಂಡಿತವಾಗಿಯೂ ಸ್ವಲ್ಪ ಸಮಾಧಾನ ಸಿಕ್ಕಿತು, ಇದಕ್ಕೆ ನಾವೆಲ್ಲರೂ ಭಾರತೀಯರು ನಿಜವಾಗಿಯೂ ಕೃತಜ್ಞರು ಮತ್ತು ಹೆಮ್ಮೆಪಡುತ್ತೇವೆ!

ಆದರೆ ಭಾರತಕ್ಕೆ ಅಗತ್ಯವಿರುವ ಎಲ್ಲವನ್ನೂ ಭಾರತ ಹೊಂದಿದೆ ಎಂದು ಕೆಲವೇ ಜನರು ಭಾವಿಸುತ್ತಾರೆ, ರಕ್ಷಣೆ, ಸುರಕ್ಷತೆ, ಸಮಾನತೆ, ಮಹಿಳೆಯರ ಮೇಲಿನ ದೌರ್ಜನ್ಯ ಇತ್ಯಾದಿಗಳಿರುವ ದೇಶದಲ್ಲಿ ಉಳಿಯಲು ಅವರಿಗೆ ಅರ್ಥವಾಗುವುದಿಲ್ಲ ಎಂಬುದು ತಮಾಷೆಯಾಗಿದೆ!

ಸರಿ, ಕೆಲವೇ ಸ್ಥಳಗಳಲ್ಲಿ ನಮಗೆ ನ್ಯಾಯ ಸಿಗುವುದಿಲ್ಲ ಎಂದು ನಾವು ನೋಡಿದ್ದೇವೆ ಮತ್ತು ಪ್ರತಿಯೊಂದು ಕಥೆಯ ಹಿಂದಿನ ಸತ್ಯವನ್ನು ಕಾನೂನು ಅರ್ಥಮಾಡಿಕೊಳ್ಳುತ್ತದೆ ಎಂದು ನಾವು ಆಶಿಸುತ್ತೇವೆ ಮತ್ತು ಪ್ರತಿಯೊಂದು ಕಥೆಯ ಹಿಂದಿನ ಸತ್ಯವನ್ನು ಅವರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದಿವೆ, ಆದರೆ ಭಾರತ ನಮಗೆ ಏನನ್ನೂ ನೀಡಿದೆಯೋ ಅದಕ್ಕಾಗಿ ನಾನು ತುಂಬಾ ಕೃತಜ್ಞಳಾಗಿದ್ದೇನೆ” ಎಂದು ಪವಿತ್ರಾ ಗೌಡ ಮಗಳು ಖುಷಿ ಗೌಡ ತಮ್ಮ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : ದುನಿಯಾ ವಿಜಯ್‌ ಜೊತೆಯಾದ ಡೇರ್‌ ಡೆವಿಲ್‌ ಹೀರೋ – ಇಂಡಸ್ಟ್ರಿಯಲ್ಲಿ ಕಿಚ್ಚು ಹಚ್ಚಲು ಬರ್ತಿದ್ದಾರೆ ನಟ ಶಿಶಿರ್‌ ಬೈಕಾಡಿ! ‌

Btv Kannada
Author: Btv Kannada

Read More